ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೄದ್ದಿ ಯೋಜನೆಯ ಗುಂಪುಗಳಿಗೆ ಲಾಭಾಂಶ ವಿತರಣೆ
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕ್ ಆನವೇರಿ ವಲಯದ ಲಿಂಗಾಪುರ ಕಾರ್ಯಕ್ಷೇತ್ರ ದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೄದ್ದಿ ಯೋಜನೆಯ ಗುಂಪುಗಳಿಗೆ ಲಾಭಾಂಶ ವಿತರಣೆಯನ್ನು ಗ್ರಾಮ ಪಂಚಾಯಿತಿ ಅದ್ಯಕ್ಷರು ಮತ್ತು ಸದಸ್ಯರ ಸಮ್ಮುಖದಲ್ಲಿ ನೆರವೆರಿಸಲಾಯಿತು
ಲಿಂಗಾಪುರ ಕಾರ್ಯಕ್ಷೇತ್ರದ ಹಜ್ ಸ್ವ ಸಹಾಯ ಸಂಘದವರು ಅತಿ ಹೆಚ್ಚು ಲಾಭಾಂಶ ಪಡೆದುಕೊಂಡಿರುತ್ತಾರೆ. ಸದರಿ ಸಂಘದ ಸಂಯೋಕರಾದ ಉಮಾ ಅವರು ಮಾತಾನಾಡಿ ನಮ್ಮ ಸಂಘದ ಸದಸ್ಯರು ಯಾವಾಗಲು ಉತ್ಪಾದಿತ ಸಾಲವಾಗಿ ಪಡೆಯುತ್ತಾರೆ ನಮ್ಮ ಸಂಘ ರಚನೆಯಾದ ಮೇಲೆ ನಮ್ಮ ಸದಸ್ಯರ ಆರ್ಥಿಕ ಪರಿಸ್ಥಿತಿ ಸುದಾರಿಸಿದೆ .ಲಾಕ ಡೌನ್ ಸಮಯದಲ್ಲಿ ಲಾಭಾಂಶ ಬಂದಿದ್ದು ತುಂಬಾ ಸಂತಸ ತಂದಿದೆ ಎಂದು ಹೇಳಿದರು.
ಸೇವಾಪ್ರತಿನಿಧಿಯಾದ ಕೇ. ಟಿ . ಹನುಮಂತರಾವ್ ಅವರು ಮಾತಾನಾಡಿ ನಮ್ಮ ಕಾರ್ಯಕ್ಷೇತ್ರದಲ್ಲಿ 56 ಸಂಘಗಳಿದ್ದು ಪ್ರಸ್ತುತ 18 ಸಂಘಗಳಿಗೆ 264225 ರೂ ನಗದು ರೂಪದಲ್ಲಿ ಲಾಭಾಂಶ ವಿತರಣೆ ಮಾಡಲಿದ್ದು ಉಳಿದ ಸಂಘಗಳಿಗೆ ಮುಂದಿನ ಹಂತದಲ್ಲಿ ವಿತರಣೆ ಮಾಡಲಾಗುತ್ತದೆ ಯೋಜನೆಯ ಸಂಘಗಳ ಶಿಸ್ತುಬಧ್ಧ ವ್ಯವಹಾರಕ್ಕೆ ಜಿಲ್ಲಾ ನಿರ್ದೇಶಕರು ಹಾಗು ತಾಲ್ಲೂಕಿನ ಯೋಜನಾದಿಕಾರಿ ಮತ್ತು ಮೆಲ್ವಿಚಾರಕರು ಇವರುಗಳ ಮಾಹಿತಿ ಮಾರ್ಗದರ್ಶನದಂತೆ ಸಂಘಗಳನ್ನು ಉತ್ತಮವಾಗಿ ನಿರ್ವಹಿಸಲು ಸಾದ್ಯವಾಗಿದೆ ಯೋಜನೆಯ ಸಂಘಗಳ ಶಿಸ್ತುಬಧ್ದ ವ್ಯವಹಾರಕ್ಕೆ ಯೋಜನೆಯ ಸಹಕಾರವೆ ಲಾಭಾಂಶ ಹಣವಾಗಿದೆ ಎಂದು ಹೇಳಿದರು . ಕಾರ್ಯಕ್ರಮಕ್ಕೆ ಆಗಮಿಸಿದ ಗ್ರಾ ಪ ಅದ್ಯಕ್ಷರಾದ ಶಿವು .ಎನ್ ಸದಸ್ಯರಾದ ರೇಖಾಲೋಕೆಶ .ಶಶಿಕಲಾ. ದೇವರಜ್ ಅವರಿಗೆ ವಂದನಾರ್ಪಣೆ ಸಲ್ಲಿಸಿದರು ಮತ್ತು ನಗದು ಸಹಾಯಕರು ಸುವಿದಾ ಸಹಾಯಕರು 18 ಸಂಘಗಳ ಪ್ರಂಬಂಧಕರು ಸಂಯೋಜಕರು ಮತ್ತು ಕೋಶಾದಿಕಾರಿಗಳು ಮತ್ತು ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತಿಯಲ್ಲಿದ್ದರು…
ವರದಿ. ರೇಖಾ, ಆರ್, ಲಿಂಗಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030