ಜನಮನ ಸೆಳೆದ ಸಂಗೀತ ಕಾರ್ಯಕ್ರಮ…!!!

Listen to this article

ಜನಮನ ಸೆಳೆದ ಸಂಗೀತ ಕಾರ್ಯಕ್ರಮ

 

ಹುಬ್ಬಳ್ಳಿ; ತಾಲೂಕಿನ ಅಂಚಟಗೇರಿ ಗ್ರಾಮದ ಸಾಮಾಜಿಕ ಕಾರ್ಯಕರ್ತರಾದ ಎ‌.ಜಿ.ದೇಶಪಾಂಡೆ ಅವರ ಶೇಮಂತಿಕಾ ನರ್ಸರಿ ಆವರಣದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಭಾನುವಾರ ಸಂಜೆ ಗೋಕುಲದ ಸುಸ್ವರ ಸಂಸ್ಥೆ ವತಿಯಿಂದ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಡಾ. ಪಾಂಡುರಂಗ ಪಾಟೀಲ ಸಂಕ್ರಾಂತಿ ಹಬ್ಬದ ಅಂಗವಾಗಿ ಆತ್ಮೀಯರು ಒಂದು ಕಡೆ ಸೇರಿಕೊಂಡು ಪರಸ್ಪರ ಪ್ರೀತಿ ವಿಶ್ವಾಸ ಹಂಚಿಕೊಳ್ಳುವುದು ಅತ್ಯಂತ ಸದಾ ಕಾಲ ಸ್ಮರಣೀಯ. ಅಲ್ಲದೇ ಇಂತಹ ಸಮಯದಲ್ಲಿ ಸುಸ್ವರ ಸಂಸ್ಥೆ ವತಿಯಿಂದ ಸಂಗೀತ ಕಾರ್ಯಕ್ರಮ ಅತ್ಯಂತ ಹೃದಯ ತುಂಬಿ ಬಂದಿತು ಎಂದು ಸಂತಸ ವ್ಯಕ್ತಪಡಿಸಿದರು . ಸುಸ್ವರ ಸಂಸ್ಥೆ ಯ ಮುಖ್ಯಸ್ಥ ಹಾಗೂ ಹಾಡುಗಾರ ಮಂಜುನಾಥ ಇಂಗಳಳ್ಳಿ,ಸಂಗೀತಾರರಾದ ಲಾವಣ್ಯ ಕೃಷ್ಣಾ ಬಾಕಳೆ, ಕುಮಾರಿ ಶ್ರೇಯಾ ಪಾಟೀಲ, ಗುರು ಹಿರೇಮಠ ಸಂಗೀತ ನೀಡಿದರು ‌ ನಿವೃತ್ತ ಪೊಲೀಸ್ ಅಧಿಕಾರಿ ಎಸ್‌.ಎಸ್ .ರೋಣದ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕಾಕಿನಾಥ ಭದ್ರಣ್ಣವರ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪನ್ಯಾಸಕ ವಿ.ಎಸ್ ಪಾಟೀಲ ಹಾಗೂ ಮುಂತಾದವರಿದ್ದರು. ಎ.ಜಿ. ದೇಶಪಾಂಡೆ ವಂದಿಸಿದರು…

ವರದಿ. ಬಸವರಾಜ್. ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend