ಛಲವಾದಿ ಸಮುದಾಯಕ್ಕೆ ಸಚಿವ ಸ್ಥಾನ ನೀಡಲು ಒತ್ತಾಯ
ಹರಪನಹಳ್ಳಿ :ಛಲವಾದಿ ಸಮುದಾಯಕ್ಕೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದಲು ಬಿಜೆಪಿ ಪಕ್ಷದಿಂದ ಆಯ್ಕೆಯಾದ ಸಮುದಾಯದ ಶಾಸಕರಿಗೆ ಸಚಿವಸ್ಥಾನ ನೀಡದೆ ವಂಚನೆ ಮಾಡಿದೆ.ರಾಜ್ಯಾದಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಸಮುದಾಯವು ಮೊದಲಿನಿಂದಲೂ ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತ ಬಂದಿದೆ ಸಂಘಟಿತ ಬೆಂಬಲದಿಂದ ಬಿಜೆಪಿ ಪಕ್ಷಕ್ಕೆ ನಿರಂತರವಾಗಿ ಬೆಂಬಲ ಸೂಚಿಸಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಪಕ್ಷದಿಂದ ಶಾಸಕರು /ಸಂಸದರು ಆಯ್ಕೆಯಾಗಲು ಸಮುದಾಯ ಸಹಕಾರಿಯಾಗಿದೆ ಕಳೆದ ಬಾರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರ ಸಂಪುಟದಲ್ಲಿ ಛಲವಾದಿ ಸಮುದಾಯದ ಯಾರೊಬ್ಬರಿಗೋ ಸಚಿವ ಸ್ಥಾನ ನೀಡದೆ ಛಲವಾದಿ ಸಮುದಾಯದಯವನ್ನ ನಿರ್ಲಕ್ಷಿಸಿರುವುದು ನೋವುಂಟು ತಂದಿದೆ ಆದರೆ ಈ ಬಾರಿಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಛಲವಾದಿ ಸಮುದಾಯದಿಂದ ಆಯ್ಕೆ ಯಾಗಿರುವ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂದು ಹರಪನಹಳ್ಳಿ ತಾಲ್ಲೂಕು ಛಲವಾದಿ ಮಹಾಸಭಾ ಮುಖಂಡರಾದ ತಾಲ್ಲೂಕ ಪ್ರಧಾನ ಕಾರ್ಯದರ್ಶಿ ಪ್ರತಾಪ್ ಛಲವಾದಿ.ಬಸವರಾಜ್ ಸಿ.ಗೌರವ ಅಧ್ಯಕ್ಷರು ಬಸವರಾಜ್ ಸಿ.ಹಿರಿಯ ಮುಖಂಡರು ಗಳಾದ ಗುಂಡಗತ್ತಿ ಕೊಟ್ರಪ್ಪ.ಕೆಂಚಪ್ಪ ಸಿ.ಮಲ್ಲಿಕಾರ್ಜುನ ಸಿ.ಪರಶುರಾಮ್ ಸಿ.ಮತ್ತು ಇತರರು ಭಾಗವಸಿದ್ದರು…
ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030