ಇಂದು ದಿನಾಂಕ 16/7/2021 ಹರಪನಹಳ್ಳಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಗಳು ತೆಲಗಿ , ರಾಗಿಮಸಲವಾಡ , ದುಗ್ಗಾವತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಕಾಂಗ್ರೆಸ್ ಸಾಂತ್ವನ ಯಾತ್ರೆಯ ಮುಂದುವರೆದ ಭಾಗವಾಗಿ ಕ್ಷೇತ್ರದ ಜನರ ಕಣ್ಮಣಿ ,ಜನಪ್ರಿಯ ನಾಯಕಿ ಶ್ರೀಮತಿ ಎಂಪಿ ವೀಣಾ ಮಹಾಂತೇಶ್ , ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಅವರು ಭೇಟಿ ಕೊಟ್ಟು ಕೋವಿಡ್ ಖಾಯಲೆಯಿಂದ ಬಳಲಿದ ಕುಟುಂಬಗಳಿಗೆ ಸಮಾಧಾನ ಸಾಂತ್ವನ ಹೇಳಿದರು ಮತ್ತು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ಸದಸ್ಯರಿಗೆ ಸಂತಾಪ ಸೂಚಿಸಿದರು. ನಾನು ಕಾಂಗ್ರೆಸ್ ಪರವಾಗಿ ಈ ಸಂಧಿಗ್ದ ಸಮಯದಲ್ಲಿ ತಮ್ಮೊಂದಿಗೆ ಇದ್ದೇನೆ ಎಂದು ಭರವಸೆ ನೀಡಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಜೀವ ಕಳೆದು ಕೊಂಡ ಬಿಪಿಎಲ್ ಕುಟುಂಬಗಳಿಗೆ ಸರಕಾರದಿಂದ ಬರುವ ಒಂದು ಲಕ್ಷ ರೂಪಾಯಿಗಳ ಪರಿಹಾರದ ಬಗ್ಗೆ ಮಾಹಿತಿ ವಿವರಿಸಿ ಸಂತ್ರಸ್ತರ ಪರವಾಗಿ ಸ್ಥಳದಲ್ಲಿಯೇ ಅರ್ಜಿ ತುಂಬಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಲುಪಿಸಲು ವ್ಯವಸ್ಥೆ ಮಾಡಿದರು . ಈ ಸಂದರ್ಭದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯ ಧನ , ರೇಷನ್ ಕಿಟ್ ವಿತರಣೆ ಮಾಡುವದರ ಮೂಲಕ , ಕಾಂಗ್ರೆಸ ಸಹಾಯ ಹಸ್ತ ಚಾಚಿದರು . ನಿರಂತರವಾಗಿ ಹರಪನಹಳ್ಳಿ ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿರುವ, ಸದಾ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಸಿ ಕೊಂಡಿರುವ ಭವಷ್ಯದ ಶಾಸಕಿ ಜನನಾಯಕಿ ಎಂಪಿ ವೀಣಾ ಮಹಾಂತೇಶ್ ಅವರಿಗೆ ಧನ್ಯವಾದಗಳನ್ನು ತಿಳಿಸಿದರು…
ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030