ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಅವರು ಭೇಟಿ ಕೊಟ್ಟು ಕೋವಿಡ್ ಖಾಯಲೆಯಿಂದ ಬಳಲಿದ ಕುಟುಂಬಗಳಿಗೆ ಸಮಾಧಾನ ಸಾಂತ್ವನ ಹೇಳಿದರು…!!!

Listen to this article

ಇಂದು ದಿನಾಂಕ 16/7/2021 ಹರಪನಹಳ್ಳಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಗಳು ತೆಲಗಿ , ರಾಗಿಮಸಲವಾಡ , ದುಗ್ಗಾವತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಕಾಂಗ್ರೆಸ್ ಸಾಂತ್ವನ ಯಾತ್ರೆಯ ಮುಂದುವರೆದ ಭಾಗವಾಗಿ ಕ್ಷೇತ್ರದ ಜನರ ಕಣ್ಮಣಿ ,ಜನಪ್ರಿಯ ನಾಯಕಿ ಶ್ರೀಮತಿ ಎಂಪಿ ವೀಣಾ ಮಹಾಂತೇಶ್ , ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಅವರು ಭೇಟಿ ಕೊಟ್ಟು ಕೋವಿಡ್ ಖಾಯಲೆಯಿಂದ ಬಳಲಿದ ಕುಟುಂಬಗಳಿಗೆ ಸಮಾಧಾನ ಸಾಂತ್ವನ ಹೇಳಿದರು ಮತ್ತು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ಸದಸ್ಯರಿಗೆ ಸಂತಾಪ ಸೂಚಿಸಿದರು. ನಾನು ಕಾಂಗ್ರೆಸ್ ಪರವಾಗಿ ಈ ಸಂಧಿಗ್ದ ಸಮಯದಲ್ಲಿ ತಮ್ಮೊಂದಿಗೆ ಇದ್ದೇನೆ ಎಂದು ಭರವಸೆ ನೀಡಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಜೀವ ಕಳೆದು ಕೊಂಡ ಬಿಪಿಎಲ್ ಕುಟುಂಬಗಳಿಗೆ ಸರಕಾರದಿಂದ ಬರುವ ಒಂದು ಲಕ್ಷ ರೂಪಾಯಿಗಳ ಪರಿಹಾರದ ಬಗ್ಗೆ ಮಾಹಿತಿ ವಿವರಿಸಿ ಸಂತ್ರಸ್ತರ ಪರವಾಗಿ ಸ್ಥಳದಲ್ಲಿಯೇ ಅರ್ಜಿ ತುಂಬಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಲುಪಿಸಲು ವ್ಯವಸ್ಥೆ ಮಾಡಿದರು . ಈ ಸಂದರ್ಭದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯ ಧನ , ರೇಷನ್ ಕಿಟ್ ವಿತರಣೆ ಮಾಡುವದರ ಮೂಲಕ , ಕಾಂಗ್ರೆಸ ಸಹಾಯ ಹಸ್ತ ಚಾಚಿದರು . ನಿರಂತರವಾಗಿ ಹರಪನಹಳ್ಳಿ ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿರುವ, ಸದಾ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಸಿ ಕೊಂಡಿರುವ ಭವಷ್ಯದ ಶಾಸಕಿ ಜನನಾಯಕಿ ಎಂಪಿ ವೀಣಾ ಮಹಾಂತೇಶ್  ಅವರಿಗೆ ಧನ್ಯವಾದಗಳನ್ನು ತಿಳಿಸಿದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend