ದಲಿತ ವಿರೋಧಿ, ಅಂಬೇಡ್ಕರ್ ವಿರೋಧಿ,ಶಾಸಕ ಕರುಣಾಕರರೆಡ್ಡಿ -ಗುಡಿಹಳ್ಳಿ ಹಾಲೇಶ್ ಆರೋಪ .
ಹರಪನಹಳ್ಳಿ: ತಾಲ್ಲೂಕಿನ ಸಿಪಿಐ ಸಂಘಟನೆಯ ತಾಲೂಕು ಕಾರ್ಯದರ್ಶಿಯಾದ ಗುಡಿಹಳ್ಳಿ ಹಾಲೇಶ್ ರವರು ಕಳೆದ 20 ವರ್ಷ ಗಳಿಂದ ತಾಲ್ಲೂಕಿನ ರೈತರ ಪರ,ಜನಪರ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ ಇದ್ದದ್ದನ್ನು ಇದ್ದಹಾಗೆ ಕಡ್ಡಿ ಮುರಿದಂತೆ ಹೇಳುವವರಾಗಿದ್ದಾರೆ , ಇವರಷ್ಟೇ ಅಲ್ಲದೆ ಹರಪನಹಳ್ಳಿಯ ಅನೇಕ ಹೋರಾಟಗಾರರು ಅಧಿಕಾರ,ದೌರ್ಜನ್ಯ ಇಂತಹವುಗಳಿಗೆ ಎಂದೂ ಹೆದರಿದವರಲ್ಲ ಅಧಿಕಾರ ಇದ್ದವರೇಇರಲಿ,ಅಧಿಕಾರ ವಿರೋಧಿಗಳೇ ಹಾಗಿರಲಿ ತಪ್ಪು ಮಾಡಿದರೆ ಅದನ್ನು ಖಡಾ ಖಂಡಿತವಾಗಿ ಖಂಡಿಸುವ ಮನೋಭಾವನೆ ತಾಲ್ಲೂಕಿನ ಹೋರಾಟಗಾರರದ್ದಾಗಿದೆ ಅದರಲ್ಲಿ ಗುಡಿಹಳ್ಳಿ ಹಾಲೇಶ್ ಕೂಡ ಒಬ್ಬರು.
ಹರಪನಹಳ್ಳಿ ಯ ಹಾಲಿ ಶಾಸಕರಾದ ಗಾಲಿ ಕರುಣಾಕರರೆಡ್ಡಿ ಇವರ ಕಚೇರಿಗೆ ಗುಡಿಹಳ್ಳಿ ಹಾಲೇಶ್ ರವರ ಊರಾದ ಕೆರೆಗುಡಿಹಳ್ಳಿ ಗ್ರಾಮದ ಕೆಲಸಕ್ಕಾಗಿ ಹಿರಿಯರ ಜೊತೆಗೆ ಶಾಸಕರ ಕಚೇರಿಗೆ ಹೋಗಿದ್ದು, ಅಲ್ಲಿ ಅಂಬೇಡ್ಕರ್ ಫೋಟೋ ಇಲ್ಲದ್ದನ್ನು ನೋಡಿ ಶಾಸಕರ ಕಚೇರಿಯಲ್ಲಿ ಸ್ವತಂತ್ರ ಹೋರಾಟಗಾರರೂ , ಸಂವಿಧಾನ ಬರೆದುಕೊಟ್ಟ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರ ಇಲ್ಲದಿರುವುದು ದುರಂತ,ಸಂವಿಧಾನದಿಂದ ನಮಗೆ ಸೌಲಭ್ಯಗಳು ಬೇಕು ಆದರೆ ಅವರ ಭಾವಚಿತ್ರ ಮಾತ್ರ ಬೇಡ, ಬಿಜೆಪಿ ಶಾಸಕರ ಕಚೇರಿಯಲ್ಲಿ ಅಂಬೇಡ್ಕರ್ ಫೋಟೋಗಳು ಇಲ್ಲ ಶಾಸಕರ ಕಚೇರಿಯಲ್ಲಿಅಂಬೇಡ್ಕರ್ ಭಾವಚಿತ್ರ ಹಾಕುವವರೆಗೂ ಒತ್ತಾಯ ಮಾಡಲೇಬೇಕು ಗುಡಿಹಳ್ಳಿ ಹಾಲೇಶ್ ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದು ಹಾಕಿಕೊಂಡಿದ್ದಾರೆ .ಇದು ಕೇವಲ ಕೇವಲ ಹರಪನಹಳ್ಳಿ ಶಾಸಕರ ಅಲ್ಲ ಯಾರೂ ಸಂಘಪಾರಿವಾರದವರ ಆಜ್ಞೆಯನ್ನು ಪಾಲನೆ ಮಾಡೋತ್ತಾರೋ ಅಂತವಾರ ಶಾಸಕರ ಮನೆಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವ ಚಿತ್ರವಿರುವುದಿಲ್ಲ ಅನಿಸುತ್ತೆ ದಲಿತ ವಿರೋಧಿ ಎಲ್ಲ ಸಂಘ ಪಾರಿವಾರದವ್ರು ಜೈ ಭೀಮ್ ಜೈ ಭೀಮ್
ಇನ್ನಾದರೂ ಹರಪನಹಳ್ಳಿ ತಾಲ್ಲೂಕುಗಲ್ಲಿ ಇರುವ ದಲಿತ ನಾಯಕರು ಅರ್ಥ ಮಾಡಿಕೊಂಡು ಇದಕ್ಕೆ ಮುಂದಿನ ಚುನಾವಣೆಯಲ್ಲಿ ಉತ್ತರ ಕೊಡಬೇಕಾಗಿದೆ..
ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030