ಡಾ. ಶ್ರೀ ಶ್ರೀ ಶ್ರೀ ಧೂಪಂ ಅಂಜಿನಪ್ಪ ಸ್ವಾಮಿಗಳು ಲಿಂಗೈಕ್ಯ.
ಪೂರ್ವ ಬಳ್ಳಾರಿ ಜಿಲ್ಲೆಯ ನೂತನ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಂಡಬೊಮ್ಮನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಗುಂಡ್ಲಹಟ್ಟಿ ಗ್ರಾಮದ ಹೊರವಲಯದಲ್ಲಿರುವ ಶ್ರೀ ಪರಮಾನಂದ ಆರೂಢ ಆಶ್ರಮದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಧೂಪಂ ಅಂಜಿನಪ್ಪ ಮಹಾಸ್ವಾಮಿಗಳು ಇಂದು ಅಪಾರವಾದ ಭಕ್ತರನ್ನು ಬಿಟ್ಟು ಅಗಲಿದ್ದಾರೆ. ಸರ್ವ ಜನಾಂಗದ ಶಾಂತಿಯ ಸಂಕೇತವಾಗಿರುವ ಶ್ರೀ ಅಂಜಿನಪ್ಪ ಮಹಾಸ್ವಾಮಿಗಳು ಇಂದು ನಮ್ಮಿಂದ ಬಾರದ ಲೋಕಕ್ಕೆ ಪಯಣಿಸಿದ್ದು ಬಹಳ ದುಃಖ ತಂದಿದೆ. ಅವರ ಆತ್ಮಕ್ಕೆ ಸದ್ಗುರು ಶ್ರೀ ಸಿದ್ಧಾರೂಢರು ಸದಾವಕಾಲ ಶಾಂತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರ ಕುಟುಂಬದ ಸದಸ್ಯರೆಲ್ಲರಿಗೂ ಮತ್ತು ಸರ್ವ ಸಕಲ ಸದ್ಭಕ್ತರಿಗೆ ಧೈರ್ಯದಿಂದ ಇರುವ ಶಕ್ತಿ ಆ ಸಿದ್ಧಾರೂಢರು ದಯಪಾಲಿಸಲೆಂದು ನಾನು ದೇವರಲ್ಲಿ ಶ್ರೀ ಸಿದ್ಧಾರೂಢರಲ್ಲಿ ಪ್ರಾರ್ಥಿಸುತ್ತೇನೆ. ಪೂಜ್ಯ ಗುರುಗಳಿಗೆ ಭಕ್ತಿ ಪೂರ್ವಕ ನನ್ನ ಕೊನೆಯ ಶರಣು ಶರಣಾರ್ಥಿಗಳು ಸಲ್ಲಿಸಿರುತ್ತೇನೆ.ಎಚ್ಚರಿಕೆ ಕ್ರಾಂತಿಕಾರಿ ವಾರ ಪತ್ರಿಕೆ ಸಂಪಾದಕರು, ಮಂಜುನಾಥ್, ಎನ್..
ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030