ಹರಪನಹಳ್ಳಿ ತಾಲೂಕಿನ : ಸಾಸ್ವಿಹಳ್ಳಿ ಮತ್ತು ಮತ್ತಿಹಳ್ಳಿ ಕ್ರಾಸ್ ನಲ್ಲಿ ಇಂದು ಯುವ ಕಾಂಗ್ರೆಸ್ ವತಿಯಿಂದ ತೈಲ ಬೆಲೆ ಏರಿಕೆಯನ್ನು ಖಂಡಿಸಿ ಹಂಡ್ರೆಡ್ ನಾಟ್ ಔಟ್ ಕಾರ್ಯಕ್ರಮವನ್ನು ಚಿಗಟೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರುಚಾಲನೆ ನೀಡಿದರು
ಈ ಸಂದರ್ಭದಲ್ಲಿ ಚಿಗಟೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶಿವರಾಜ ಎಚ್ . ಮಾತನಾಡಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸಾರ್ವಜನಿಕರಿಂದ ಕೋವಿಡ್ ಸಮಯದಲ್ಲಿ ತೈಲ ಬೆಲೆ ಏರಿಸುವ ಮೂಲಕ ಸರ್ಕಾರ ತೆರಿಗೆ ಭಯೋತ್ಪಾದನೆ ನಡೆಸುತ್ತಿದೆ ಎಂದು ಆರೋಪಿಸಿದರು.
ಮತ್ತು ರಾಜ್ಯ ಸರ್ಕಾರ ಕೋವಿಡಿ ಪೀಡಿತರಿಗೆ ಸಹಾಯ ಮಾಡದೆ ಕಂಡೂಕಾಣದಂತೆ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು ಈ ಸಂದರ್ಭದಲ್ಲಿ ಚಿಗಟೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶಿವರಾಜ ಹರಿಯಮ್ಮನಹಳ್ಳಿ ಉಪಾಧ್ಯಕ್ಷರಾದ ಸಾಸ್ವೆಹಳ್ಳಿ ನಾಗರಾಜ್. ಹಗರಿ ಗುಡಿಹಳ್ಳಿ ಗೋಪಿ ಸಾಸ್ವೆಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡರಾದ ಕೆ ಮಲ್ಲಪ್ಪ ಕೆ ವಾಮನ ದೇವ ಗೌಡ್ರು ಎಚ್ ಶಂಕರೇಗೌಡ ಮತ್ತು ಮೈದೂರು ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಕೆಂಚಪ್ಪ ಕೆಸರಹಳ್ಳಿ ರಮೇಶ ಅಂಜಿನಪ್ಪ ಪರಸಪ್ಪ ದೊಡ್ಡ ಕೆಂಚಪ್ಪ ಇನ್ನೂ ಅನೇಕ ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಹಿರಿಯ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು…
ವರದಿ. ಬಸಣ್ಣಿ ಬಣವಿಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030