ಸಿರುಗುಪ್ಪ ನಗರದ ಜಿ ಎಸ್ ಲಾಡ್ಜ್ ನಲ್ಲಿ ಕಾಂಗ್ರೆಸ್ ಮಾಜಿ ಶಾಸಕರಿಂದ ಪತ್ರಿಕೆ ಗೋಷ್ಠಿ…!!!

Listen to this article

ಸಿರುಗುಪ್ಪ ನಗರದ ಜಿ ಎಸ್ ಲಾಡ್ಜ್ ನಲ್ಲಿ ಕಾಂಗ್ರೆಸ್ ಮಾಜಿ ಶಾಸಕರಿಂದ ಪತ್ರಿಕೆ ಗೋಷ್ಠಿ..

ಸಿರುಗುಪ್ಪ ನಗರದ ಜಿ ಎಸ್ ಲಾಡ್ಜ್ ನಲ್ಲಿ ಕಾಂಗ್ರೆಸ್ ಪಕ್ಷ ಮುಖಂಡರಿಂದ ಸುದ್ದಿಗೋಷ್ಠಿ ಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ ಎಂ ನಾಗರಾಜ್ ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ನಮ್ಮ ಪಕ್ಷದ ಹಿರಿಯ ಮುಖಂಡರು ಯುವ ಮುಖಂಡರು ಪಕ್ಷದ ಎಲ್ಲಾ ಕಾರ್ಯಕರ್ತರು ನಾವು ಪ್ರಬಲರಾಗಿದ್ದೀವಿ ರಾಜ್ಯದ ಎಲ್ಲಾ ವರ್ಗದ ಪ್ರತಿ ಕುಟುಂಬಕ್ಕೂ ಕಾಂಗ್ರೆಸ್‌ ಪಕ್ಷ ಘೋಷಣೆ ಮಾಡಿರುವ ಜನಪರ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಕೊಡಲು ಸಾಧ್ಯವೇ ಎಂಬುದನ್ನು ಯೋಚಿಸಿ ಅದಕ್ಕಾಗಿ ನಮ್ಮಪಕ್ಷವನ್ನು ಬೆಂಬಲಿಸಬೇಕು ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಆಂತರೀಕ ಸಮೀಕ್ಷೆಗಳಿಂದ ವಿಪಕ್ಷದವರಿಗೂ ಗೊತ್ತಾಗಿದೆ.
ಅದಕ್ಕಾಗಿಯೇ ಇಲ್ಲದ ಭರವಸೆ ಕೊಟ್ಟು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕೆಲವು ಪಕ್ಷಗಳ ಯಾವುದೇ ಆಸೆ ಆಮಿಷ ಮತ್ತು ಸುಳ್ಳು ಭರವಸೆಗಳಿಗೆ ಬಲಿಯಾಗಿ ಕಳೆದ ಬಾರಿ ಮೋಸ ಹೋದಂತೆ ಈ ಬಾರಿ ನಮ್ಮ ಕ್ಷೇತ್ರ ಜನರು ಮೋಸಹೋಗಬಾರದು ರಾಜ್ಯಕ್ಕೆ ಕಾಂಗ್ರೆಸ್‌ ಪಕ್ಷ ಎಷ್ಟುಅನಿವಾರ್ಯವೋ ಸಿರುಗುಪ್ಪದಲ್ಲೂ ಕೂಡ ಕಾಂಗ್ರೆಸ್ ಪಕ್ಷ ಅಷ್ಟೇ ಅನಿವಾರ್ಯವಾಗಿದೆ ಆದ್ದರಿಂದ ಕ್ಷೇತ್ರದ ಮತದಾರರು ಮತದಾನದ ಮಹತ್ವವನ್ನು ತಿಳಿದು ರಾಜ್ಯದ ಹಿತದೃಷ್ಟಿಯಿಂದ . ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಅಮೂಲ್ಯವಾದ ಮತ ನೀಡಿ ನಮ್ಮ ನಡೆ ಅಭಿವೃದ್ಧಿ ಕಡೆ ಎಂದು ಘಂಟಾಘೋಷವಾಗಿ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಚಂದ್ರಯ್ಯ ಸ್ವಾಮಿ ಗೋಪಾಲ್ ರೆಡ್ಡಿ ಮಾರುತಿ ರೆಡ್ಡಿ ಬಿ ಎಂ ಸತೀಶ್ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರು ಚೊಕ್ಕ ಬಸವನಗೌಡ ಕರಿಬಸಪ್ಪ ನರೇಂದ್ರ ಸಿಂಹ ಕೊಡ್ಲೆಮಲ್ಲಿಕಾರ್ಜುನ ನರಸಿಂಹ ನಾಯಕ ಮಲ್ಲಿಕಾರ್ಜುನ ಬಾಲಪ್ಪ ಜೆ ಬಸವನಗೌಡ ಉಮೇಶ್ ಗೌಡ ಗಣೇಶ ಅಪ್ಪಾಜಿ ಗಜಿಗಿನಾಳ್ ವೀರೇಶ್ ಗೌಡ ಕೋಟಿ ರೆಡ್ಡಿ ಕೋದಂಡರಾಮ ಚಿ. ಹುಸೇನ್ ಭಾಷಾ ಇನ್ನುಮುಂತಾದ ಕಾರ್ಯಕರ್ತರು ಭಾಗವಹಿಸಿದ್ದರು..

ವರದಿ. ಉಮೇಶ್ ಕೆಂಚನಗುಡ್ಡ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend