ಡಾ.ಬಿ.ಆರ್.ಅಂಬೇಡ್ಕರ ಪ್ರಜಾ ಸೈನ್ಯ ಗೌರವಾಧ್ಯ ಕ್ಷರಾಗಿ ಶರಣಪ್ಪ ಆಯ್ಕೆ.
ಸಿಂಧನೂರು :ಅ.14. ನಗರದ ಪ್ರವಾಸಿ ಮಂದಿರ ದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಪ್ರಜಾ ಸೈನ್ಯ ತಾಲೂಕು ಸಮಿತಿ ವತಿಯಿಂದ ನಡೆದ ಸಭೆಯಲ್ಲಿ ಶರಣಪ್ಪ ತಂದೆ ಪಕೀರಪ್ಪ ಕೆ.ಬಸ್ಸಾಪುರ ಇವರನ್ನು ಡಾ.ಬಿ.ಆರ್. ಅಂಬೇಡ್ಕರ ಪ್ರಜಾ ಸೈನ್ಯ ತಾಲೂಕು ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ತಾಲೂಕಾಧ್ಯಕ್ಷ ನಾಗರಾಜ ಸಾಸಲಮರಿ ನೇಮಕಾತಿ ಆದೇಶ ಪತ್ರ ನೀಡಿದರು.
ನಂತರ ಮಾತನಾಡಿದ ನಾಗರಾಜ ಸಾಸಲಮರಿ ಸಂಘದ ವತಿಯಿಂದ ತಮ್ಮನ್ನು ತಾಲೂಕು ಗೌರವ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆದೇಶಹೊರಡಿಸಿದ್ದು ತಾವು ಹುದ್ದೆಯನ್ನು ಪಡೆದುಕೊಂಡು ಸಿಂಧನೂರು ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನರ ಕುಂದು ಕೊರತೆಗಳನ್ನು ನಿವಾರಿಸಲು ಮತ್ತು ಸಂಘದ ಕೆಲಸಗಳನ್ನು ಸೂಸುತ್ತವಾಗಿ ನಡೆಸಿ ಕೊಂಡು ಹೋಗಬೇಕು.ಸಾರ್ವಜನಿಕರ ಅಹವಾಲು ಗಳನ್ನು ಆಲಿಸಿ ಅವುಗಳನ್ನು ಪಾಲಿಸಬೇಕು. ತಾವು ಮಾಡುವ ಕೆಲಸಗಳನ್ನು ತಾಲೂಕು ಸಮಿತಿಯ ಗಮನಕ್ಕೆ ತರಬೇಕೆಂದರು.
ಈ ಆದೇಶವನ್ನು ಜಿಲ್ಲಾ ಮತ್ತು ತಾಲೂಕು ಸಮಿತಿ ಯು ಆದೇಶ ಹೊರಡಿಸಿದ್ದು,ಒಂದು ವೇಳೆ ಈ ಆದೇಶವನ್ನು ಬೇರೆ ತರಹದ ಕೆಲಸಕ್ಕೆ ಬಳಸಿಕೊಂಡ ಲ್ಲಿ ನಿಮ್ಮನ್ನು ಮುಲಾಜಿಲ್ಲದೆ ಮತ್ತು ತಾಲೂಕು ಸಮಿತಿ ವತಿಯಿಂದ ಕಾನೂನು ರೀತಿ ಕ್ರಮ ಕೈಕೊಳ್ಳ ಲು ಸಮಿತಿಗೆ ಅವಕಾಶ ವಿರುತ್ತದೆ ಮತ್ತು ಸಮಿತಿಯ ಲೆಟರ್ ಪ್ಯಾಡುಗಳನ್ನು ಕೆಟ್ಟ ಮತ್ತು ದುಷ್ಪಪರಿ ಣಾಮಗಳೂ ಬರುವಂತಹ ಕೆಲಸಗಳಿಗೆ ದುರುಪ ಯೋಗ ಪಡಿಸಿಕೊಳ್ಳುವಂತಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾದಿಗ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಅಧ್ಯಕ್ಷರಾದ ಮರಿಯಪ್ಪ ಇವರಿಗೆ ತಾಲೂಕು ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನಾಗರಾಜ ಹೇಡಿಗಿಬಾಳ ಜಿಲ್ಲಾಧ್ಯಕ್ಷರು, ಮುತ್ತುಸಾಗರ,ಮೈತ್ರಿ ದಲಿತ ಮುಖಂಡರು, ಸಂಗಮೇಶ,ಈರಣ್ಣ ಸುಲ್ತಾನ ಪುರ, ಮಹೇಶ, ಶಿನು, ಹುಲುಗಪ್ಪ, ಮಲ್ಲಣ್ಣ,ಹನುಮೇಶ ಜಾಳಿಹಾಳ, ನಾಗರಾಜ ಸುಕಾಲಪೇಟೆ ಸೇರಿದಂತೆ ಇತರರು ಭಾಗವಹಿಸಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030