ಗುಡುದೂರ ಕಾಲುವೆಗೆ ಕಾರು ಬಿದ್ದು 3ಜನ ಸಾವು…!!!

Listen to this article

ಗುಡುದೂರ ಕಾಲುವೆಗೆ ಕಾರು ಬಿದ್ದು 3ಜನ ಸಾವು.

ಸಿಂಧನೂರ : ಅ.30.ಚಾಲಕನ ನಿಯಂತ್ರಣ ತಪ್ಪಿ ಕಾರು ಎಡದಂಡೆ ಕಾಲುವೆಗೆ ಬಿದ್ದು ಒಂದೇ ಕುಟುಂಬದ 3 ಜನ ಮರಣ ಹೊಂದಿದ ಘಟನೆ ಇಂದು ಮುಂಜಾನೆ 09:30 ಗಂಟೆಗೆ ಗುಡುದೂರ ಎಡದಂಡೆ ಕಾಲುವೆ ಬಳಿ ಸಂಭವಿಸಿದೆ.

ಲಿಂಗಸುಗೂರ ತಾಲ್ಲೂಕಿನ ಗೋನವಾಟ್ಲ ಗ್ರಾಮದ ವರಾದ ಸೂರ್ಯ ನಾರಾಯಣ ವಯಸ್ಸು 65, ಅತನ ಹೆಂಡತಿ ನಾಗರತ್ನ ವಯಸ್ಸು 60,ಅವರ ಮಗ ಶ್ರೀನಿವಾಸ ವಯಸ್ಸು 40 ಮರಣ ಹೊಂದಿದವರಾಗಿದ್ದಾರೆಂದು ತಿಳಿದು ಬಂದಿದೆ.
ಸೂರ್ಯ ನಾರಾಯಣ ಹಾಗೂ ಆತನ ಹೆಂಡತಿ ನಾಗರತ್ನ ಶವಗಳು ಸಿಕ್ಕಿದ್ದು ಮಗ ಶ್ರೀನಿವಾಸ ನೀರಿನಲ್ಲಿ ಹರಿದು ಕೊಂಡು ಹೋಗಿದ್ದಾನೆ ಪೋಲೀಸರು ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ

ಲಿಂಗಸುಗೂರ ನಿಂದ ಗಂಗಾವತಿ ತಾಲ್ಲೂಕಿನ ಹೋಸಗೇರಾ ಕ್ಯಾಂಪ ಗೆ ಕುಟುಂಬಸ್ಥರು ಕಾರಿನಲ್ಲಿ ಹೊರಟಾಗ ಶ್ರೀನಿವಾಸ ವಾಹನ ಕಾರು ಚಾಲನೆ ಮಾಡುತ್ತಿದ್ದು ಚಾಲಕನ ನಿಯಂತ್ರಣ ತಪ್ಪಿದ ಕಾರು ಗುಡದೂರ ಎಡದಂಡೆ ಕಾಲುವೆಯಲ್ಲಿ ಬಿದ್ದಿದ್ದು ಕಾರು ಚಾಲಕ ಶ್ರೀನಿವಾಸ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ ಸೂರ್ಯ ನಾರಾಯಣ ಹಾಗೂ ನಾಗರತ್ನ ಶವಗಳು ಧೊರೆಕಿದ್ದು ಸಿಂಧನೂರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ತರಲಾಗಿದ್ದು ಆಸ್ಪತ್ರೆಯ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬಳಗಾನೂರ ಪೊಲೀಸ ಠಾಣೆಯ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ….

 

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend