ಜವಗೇರಾದ ಬಸ್ಸು ಬೈಕ ಡಿಕ್ಕಿಯಾಗಿ ಸ್ಥಳದಲ್ಲಿ ಇಬ್ಬರು ಸಾವು.
ಸಿಂಧನೂರ ಅ.30.ಬೈಕ್ ಹಾಗೂ ಬಸ್ಸು ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ ಮರಣ ಹೊಂದಿದವರು ಗಾಣದಾಳ ಗ್ರಾಮದವರೆಂದು ತಿಳಿದು ಬಂದಿದೆ.
ತಾಲ್ಲೂಕಿನ ಜವಳಗೇರಾ ಗ್ರಾಮದ ಪಿಡಬ್ಯೂಡಿ ಇಲಾಖೆಯ ಮುಂದೆ ಇಂದು ಅಪಘಾತ ಸಂಭವಿಸಿದ್ದು ಬೈಕ್ ನಲ್ಲಿದ್ದವರು ಇಬ್ಬರು ಮರಣ ಹೊಂದಿದ್ದು ಇವರು ರಾಯಚೂರ ತಾಲ್ಲೂಕಿನ ಗಾಣದಾಳ ಗ್ರಾಮದವರೆಂದು ತಿಳಿದು ಬಂದಿದೆ.
ಅಪಘಾತ ನಡೆದ ಸ್ಥಳಕ್ಕೆ ಬಳಗಾನೂರ ಪಿಎಸ್ಐ ವಿರೇಶ ಬಂದು ವಿಚಾರಣೆ ನಡೆಸಿ ಶವಗಳನ್ನು ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ ಅಪಘಾತ ನಡೆದ ಬಗ್ಗೆ ಸ್ಥಳೀಯರಿಂದ ಮಾಹಿತಿಯ ಪಡೆದುಕೊಂಡು ವಿಳಾಸ ಪತ್ತೆ ಹಚ್ಚಿ ಕುಟುಂಬಸ್ಥರಿಗೆ ಮಾಹಿತಿಯ ನೀಡಲಾಗುತ್ತದೆ ಎಂದು ಪೋಲೀಸರು ಪತ್ರಿಕೆಗೆ ತಿಳಿಸಿದರು…
ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030