ಗಾಂಧಿನಗರ ಸ್ಪಟಿಕ ಲಿಂಗ ಪ್ರಸಿದ್ದ ಪುಣ್ಯ ಸ್ಥಳ – ಮಾಜಿ ಪ್ರಧಾನಿ ದೇವೆಗೌಡ.
ಸಿಂಧನೂರು ಮೇ 9 ಸ್ಪಟಿಕ ಲಿಂಗ ಮಹೋತ್ಸವದಲ್ಲಿ ಭಾಗವಹಿಸಿ ಆತ್ಮಲಿಂಗ ದರ್ಶನ ಪಡೆಯಲು ತೊಂಬತ್ತರ ಇಳಿ ವಯಸ್ಸಿನಲ್ಲಿ ಯಾವುದೇ ಫಲಹಾರ ಸೇವಿಸದೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಇಡೀ ದೇಶದಲ್ಲಿ ಹಲವಾರು ರಾಜ್ಯಗಳ ದೇವಸ್ಥಾನಗಳಿಗೆ ಬೇಟಿ ನೀಡಿ ದರ್ಶನ ಪಡೆದಿದ್ದೆನೆ ಆದರೆ ಗಾಂಧಿನಗರ ದಲ್ಲಿ ನಿರ್ಮಾಣವಾದ ಸ್ಪಟಿಕ ಸಹಿತ ಆತ್ಮ ಶಿವಲಿಂಗ ಎಲ್ಲಿ ನೋಡಿಲ್ಲ ಅಷ್ಟೊಂದು ಅದ್ಭುತ ಹಾಗೂ ಭಕ್ತರ ಆಕರ್ಷಣೆಯ ಪುಣ್ಯ ಸ್ಥಳವಾಗಿದೆಂದು ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡ ಹೇಳಿದರು.
ತಾಲೂಕಿನ ಗಾಂಧಿನಗರದಲ್ಲಿ ನಿರ್ಮಾಣವಾದ ಲಕ್ಷ ನರ್ಮದಾ ಲಿಂಗ ಸಹಿತ ಆತ್ಮ ಲಿಂಗ ದಿವ್ಯ ಪ್ರತಿಷ್ಠಾನ ಮಹೋತ್ಸವ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಇಡೀ ದೇಶದಲ್ಲಿ ಗಾಂಧಿನಗರ ದೊಡ್ಡ ಯಾತ್ರಾ ಹಾಗೂ ಪುಣ್ಯ ಸ್ಥಳವಾಗಲಿದೆಂದರು.
ಶಾಸಕ ವೆಂಕಟರಾವ್ ನಾಡಗೌಡ ಮಾತನಾಡುತ್ತಾ ಗಾಂಧಿನಗರ ಧಾರ್ಮಿಕ ಪುಣ್ಯ ಕ್ಷೇತ್ರ ವಾಗಿದ್ದು ಎಂ.ಗಂಗಾಧರ ರಾವ್ ,ಎಂ
ಬಾಸ್ಕರ್ ರಾವ್ ಸೇರಿದಂತೆ ಹಲವಾರು ಜನ ಸಹಾಯ ಸಹಕಾರದೊಂದಿಗೆ ಶ್ರಮಪಟ್ಟು ಅದ್ಭುತವಾದ ಸ್ಪಟಿಕ ಶಿವಲಿಂಗ ಪ್ರತಿಷ್ಠಾಪನೆ ಮಾಡಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಮತ್ತು ಸಿಂಧನೂರು ಕ್ಷೇತ್ರದಲ್ಲಿ ಲಕ್ಷ ಸ್ಪಟಿಕ ಲಿಂಗ ಪ್ರತಿಷ್ಠಾಪನೆ ಯಾಗಿದ್ದು ಸಂತೋಷದ ಸಂಗತಿ ಕ್ಷೇತ್ರದ ಜನತೆ ದೇವರ ದರ್ಶನ ಪಡೆದು ಸದಾ ಆರೋಗ್ಯ, ಆಯಸ್ಸುದಿಂದ ಇರಲಿ ಹಾಗೂ ಈ ದೇವಾಲಯ ಇತಿಹಾಸದ ಪುಟ ಸೇರಲಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಒಳಬಳ್ಳಾರಿ ಚೆನ್ನಬಸವ ಮಹಾ ಸ್ವಾಮಿಗಳು ವಹಿಸಿದ್ದು , ಮಾನ್ವಿ ಶಾಸಕರಾದ ವೆಂಕಟಪ್ಪ ನಾಯಕ ,ಮುಖಂಡರಾದ ಬಸವರಾಜ ನಾಡಗೌಡ ,ನಲ್ಲಾ ವೆಂಕಟೇಶ್ವರ ರಾವ್ , ಸಿದ್ದು ಬಂಡಿ , ಕರಿಯಮ್ಮ ನಾಯಕ , ಬಿ.ಶ್ರೀ ಹರ್ಷ ,ನಾಗೇಶ ಹಂಚಿನಾಳ ಕ್ಯಾಂಪ್ ,ದಾಸರಿ ಸತ್ಯನಾರಾಯಣ ,ವೆಂಕಟೇಶ ನಂಜಲದಿನ್ನಿ ,ಧರ್ಮನಗೌಡ , ತಹಶಿಲ್ದಾರ ಮಂಜುನಾಥ ಬೋಗಾವತಿ ,ಅಶೋಕ ಉಮಲೂಟಿ, ರಾಘವೇಂದ್ರ ಬಳಗಾನೂರು, ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030