ಸಿಂಧನೂರು:ತಾಲೂಕಿನಾದ್ಯಂತ ಮೃತರ ಕುಟುಂಬಕ್ಕೆ ತೆರಳಿ ದೈರ್ಯ ತುಂಬುವ ಕೆಲಸ ಬಸವನಗೌಡ ಬಾದರ್ಲಿ
“ಕೋವಿಡ್ನಿಂದ ಮೃತರ ಕುಟುಂಬಕ್ಕೆ ಸಹಾಯ ಹಸ್ತ”
ತಾಲೂಕಿನಲ್ಲಿ ಕೊರೊನಾದಿಂದ ಆರೋಗ್ಯ, ಸಾವು-ನೋವು ಹಾಗೂ ಉದ್ಯೋಗ, ಕಳೆದುಕೊಂಡವರು ಆರ್ಥಿಕವಾಗಿ ಸಂಕಷ್ಟಕೀಡಾದ ರೈತರ, ಕಾರ್ಮಿಕರ, ಬಡವರ, ಕಷ್ಟಗಳನ್ನು ಆಲಿಸಿ, ಬಾದರ್ಲಿ ಜಿ.ಪಂ.ವ್ಯಾಪ್ತಿಯಲ್ಲಿ ಮೃತರಾದ ಬಾದರ್ಲಿಯ ದೂಗಪ್ಪ ನಾಯಕ, ಅಲಬನೂರಿನ ಕೆ. ಬಸವರಾಜಪ್ಪ, ಹರೇಟನೂರನ ದೇವರಾಜ ನಾಯಕ, ಗಿಣಿವಾರದ ವೆಂಕನಗೌಡ ಕೋಟೆಗೋಡೆ ಮತ್ತು ಬಿ.ವೆಂಕಟೇಶ ಮೃತರ ಕುಂಟುಂಬಕ್ಕೆ ಬೇಟಿ ನೀಡಿ ಮೃತರ ಕುಂಟುಂಬಸ್ಥರಿಗೆ ಆತ್ಮ ಸ್ಥೈರ್ಯ ತುಂಬಿ ಅವರ ಸಮಸ್ಯೆ ಆಲಿಸಿದರು. ಕುಂಟುಂಬದ ಮುಖ್ಯಸ್ಥರಿಗೆ ತಲಾ 10.000 ರೂಗಳ ಧನ ಸಹಾಯ ಮಾಡಿ ನಾವು ನಿಮ್ಮೊಂದಿಗಿದ್ದೇವೆ ಎಂದು ದೈರ್ಯ ತುಂಬಿದರು. ಹಾಗೂ ಒಂದು ತಿಂಗಳ ಕಾಲ ನಿರಂತವಾಗಿ ಈ ಅಭಿಯಾನ ಸಾಗುತ್ತದೆ.ಸರಕಾರ ಮೃತರ ಸಂಖ್ಯೆಯಲ್ಲಿ ಸುಳ್ಳು ವರದಿ ಹೇಳುತ್ತಿದ್ದು ಸರಿಯಾದ ವರದಿಯನ್ನು ತರಿಸಿಕೊಂಡು ಮೃತರಿಗೆ ತಲಾ 5 ಲಕ್ಷ ಪರಿಹಾರ ನೀಡಬೇಕು ಎಂದು ಈ ಸಮಯದಲ್ಲಿ ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೆಂಕಟೇಶ ರಾಗಲಪರ್ವಿ, ಶಿವಕುಮಾರ ಜವಳಿ, ಫಕೀರಯ್ಯ ರಾಗಲಪರ್ವಿ, ದೇವಪ್ಪ ಅಲಬನೂರು,ಆರ್.ಪಂಪಾಪತಿ,ಮುನ್ನಾ, ಹಾಗೂ ಗ್ರಾಮ ಪಂಚಾಯತ್ ಸದಸ್ಯರು, ಹುಚ್ಚಪ್ಪ ಹರೇಟನೂರು, ಚನ್ನಪ್ಪ ಅಲಬನೂರು, ಯಂಕನಗೌಡ, ಮಾಜಿ ತಾ.ಪಂ.ಸ ಮಲ್ಲರಡ್ಡಿ, ಮಾಹಾದೇವ, ಪಕೀರಪ್ಪ, ನಾಗಪ್ಪ,ರಾಮನಗೌಡ, ಸಿದ್ದನಗೌಡ, ಬಸವರಾಜ ನಾಯಕ, ಬಸವರಾಜ, ವೆಂಕಟೇಶ ಯದ್ದಲದೊಡ್ಡಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಊರಿನ ಹಿರಿಯರು ಇದ್ದರು.
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030