ಸಿಂಧನೂರು :ಕಾಂಗ್ರೆಸ್ ಪಕ್ಷದಿಂದ ಸಂಸ್ಥಾಪನಾ ದಿನಾಚರಣೆ.
ಇಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿಯವರ ನಿವಾಸದಲ್ಲಿ ಪಂಪನಗೌಡ ಬಾದರ್ಲಿಯವರ ಅಧ್ಯಕ್ಷತೆಯಲ್ಲಿ ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ 136 ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಹಾಗೂ ಹಿರಿಯರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ದೇಶದ ಇತಿಹಾಸ ಕಂಡ ಪ್ರಮುಖ ರಾಜಕೀಯ ಪಕ್ಷ ಹಾಗೂ ಜನಪರತೆಯ ಆಧಾರದ ಮೇಲೆ ಎಲ್ಲಾ ವರ್ಗಗಳ ಏಳಿಗೆಗಾಗಿ ಶ್ರಮಿಸುತ್ತಾ ಸಮಾನ ಅವಕಾಶಗಳನ್ನು ಸೃಷ್ಟಿಸಿದ ಕಾಂಗ್ರೆಸ್ ಪಕ್ಷದ 137ನೇ ಸಂಸ್ಥಾಪನಾ ದಿನಾಚರಣೆ ಸ್ವಾತಂತ್ರ್ಯದ ನಂತರದಲ್ಲಿ ಅತ್ಯಂತಆರೋಗ್ಯಪೂರ್ಣವಾಗಿ ದೇಶವನ್ನು ಮುನ್ನಡೆಸಿದ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು.
ಅದರಲ್ಲೂ ದೇಶ ವಿಭಜನೆಯ ತಂತ್ರಗಳನ್ನು ಅನುಸರಿಸುತ್ತಾ ಸದಾ ದೇಶದೊಳಗೆ ಕ್ಷೋಭೆ ಹಾಗೂ ಅಶಾಂತಿಯನ್ನೇ ಉಂಟುಮಾಡಲು ಶ್ರಮಿಸುತ್ತಿದ್ದ ದುಷ್ಟ ಮನುವಾದಿಗಳ ನಿಯಂತ್ರಣಕ್ಕೆ ದೇಶವನ್ನು ಒಪ್ಪಿಸದೇ ಸುದೀರ್ಘ ಕಾಲ ದೇಶದ ಅಧಿಕಾರ ಚುಕ್ಕಾಣಿ ಹಿಡಿದು ಬಾಬಾ ಸಾಹೇಬರ ಸಂವಿಧಾನದ ನೆರವಿನಿಂದ ವ್ಯವಸ್ಥಿತವಾಗಿ ದೇಶದ ಮುನ್ನಡೆಗೆ ಕಾರಣವಾದ ಕಾಂಗ್ರೆಸ್ ಪಕ್ಷವು ನೂರೆಂಟು ಜನಪರ ಕಾಯ್ದೆಗಳ ಮೂಲಕ ಜನರ ಬದುಕಿನ ಹಿತ ಕಾಯುವಂತಹ ಕೆಲಸ ಮಾಡಿತು ಎಂಬುದನ್ನು ಹೇಳದೇ ಹೋದರೆ ಅದು ಆತ್ಮ ವಂಚನೆ ಆಗುತ್ತದೆ.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಸನ್ಮಾನಿತರಾದ,ಕಾಳಿಂಗಪ್ಪ ವಕೀಲರು,ಅಶೋಕ್ ಗೋಪಾಲ್ ದಣಿ,ಹುಲಗಪ್ಪ ರೈತ ನಗರ ಕ್ಯಾಂಪ್, ಛತ್ರಪ್ಪ ರೈತರ ನಗರ ಕ್ಯಾಂಪ್, ದೊಡ್ಡ ಅಮರಯ್ಯ ವಲ್ಕಂದಿನ್ನಿ, ಉಸ್ಮಾನ್ ಸಾಬ್, ಯಮನಪ್ಪ ಮಲ್ಲಾಪುರು,ಮಲ್ಲಿಕಾರ್ಜುನ್ ಪಾಟೀಲ್ ಅಧ್ಯಕ್ಷರು ನಗರಸಭೆ,ಖಾಜಾ ಮಲ್ಲಿಕ್ ಅಧ್ಯಕ್ಷರು ನಗರ ಬ್ಲಾಕ್ ಕಾಂಗ್ರೆಸ್, ಅನಿಲ್ ಕುಮಾರ್ ವೈ ಪ್ರಧಾನ ಕಾರ್ಯದರ್ಶಿ ಬ್ಲಾಕ್ ಕಾಂಗ್ರೆಸ್, ಕಾಂಗ್ರೆಸ್ ಪಕ್ಷದ ಚುನಾಯಿತ ನಗರಸಭೆ ಸದಸ್ಯರಾದ,ಶಬ್ಬೀರ್ ನಾಯಕ್, ಮುನೀರ್ ಪಾಷಾ,ಶರಣಪ್ಪಉಪ್ಪಲದೊಡ್ಡಿ, ಎಚ್ ಭಾಷಾ, ಕೆ ಸುರೇಶ ಜಾದವ್,ಶೇಖರಪ್ಪ, ಆಲಮ್ ಭಾಷಾ.ರಾಜು ದತ್ತುರಾವ್,ಟಿ ಸುಬ್ಬರಾವ್. ಮುಖಂಡರಾದ ಶಿವನಗೌಡ ಎಲೆಕೂಡ್ಲಿಗಿ, ಲಿಂಗರಾಜ್ ಪಾಟೀಲ್ ಹಂಚಿನಾಳ, ನಿರುಪಾದೆಪ್ಪ ಗುಡಿಹಾಳ, ದೊಡ್ಡನಗೌಡ ಕಲ್ಲೂರ್,ದಶರಥ ರೆಡ್ಡಿ,ದುರುಗಪ್ಪ ಕಟಲಿ,ಅರುಣ್ ಕುಮಾರ್ ನಾಯಕ್,ವೀರೇಶ್ ಪಟೇಲ್ ವಾಡಿ,ಕನಕಪ್ಪ ನಾಯಕ್, ಲಿಂಗಧರ್, ಇಬ್ರಹಿಂ,ಶಪ್ಪು ಖಾನ್, ಅಲಿ ಮೌಲಾಲಿ, ಮೌಲಾಸಾಬ್,ನಾಗರಾಜ್ ಕೌತಾಳ,ಬಾಬಾ, ಪಕ್ಷದ ಕಾರ್ಯಕರ್ತರು ಇನ್ನು ಮುಂತಾದವರು ಉಪಸ್ಥಿತರಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030