ಸಂಕಷ್ಟದ ಸಮಯದಲ್ಲಿ ಸಮಸ್ಯೆಗೆ ಸ್ಪಂದಿಸುವ ವಿಜಯನಗರದ ಸಚಿವರು ಹೆಮ್ಮೆಯ ಆನಂದಸಿಂಗ್* .. ಜಿಂದಾಲ್ ಬಳಿಯ ಕೋವಿಡ್ ತಾತ್ಕಾಲಿಕ ಆಸ್ಪತ್ರೆಯ ಸಿಬ್ಬಂದಿಗಳ ಜೊತೆ ಭೋಜನ ಸವಿದ ಸಚಿವರಾದ ಆನಂದ್ಸಿಂಗ್ ರವರು ಕರೋನ ಸೋಂಕಿತರಿಗೆ ಕಾರ್ಯವನ್ನು ನಿರ್ವಹಿಸುವ ವೈದ್ಯ ಸಿಬ್ಬಂದಿ ಗಳಿಗೆ ಪ್ರೋತ್ಸಾಹ ನೀಡಿದರು
ಕೊರೊನಾ ಸಮಯದಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಯಾರೂ ಮುಂದೆ ಬರುತ್ತಿಲ್ಲ, ಎಲ್ಲಾ ಕಡೆ ವೈದ್ಯಕಿಯ ಸಿಬ್ಬಂದಿ ಕೊರತೆ ಉಂಟಾಗಿದೆ. ಇಂತಹ ಸಂದೀಗ್ಧ ಪರಿಸ್ಥಿತಿಯಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ಜಿಂದಾಲ್ ಬಳಿಯ ಕೋವಿಡ್ ತಾತ್ಕಾಲಿಕ ಆಸ್ಪತ್ರೆಯ ಸೇವೆ ನೀಡಲು ಆಗಮಿಸಿರುವ ವೈದ್ಯರು ಹಾಗೂ ನರ್ಸ್ ಗಳಿಗೆ ಸಿದ್ದಪಡಿಸಿದ ಭೋಜನವನ್ನು ಮೂಲಭೂತ ಸೌಕರ್ಯ, ಹಜ್ ಮತ್ತು ವಕ್ಫ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್_ಸಿಂಗ್ ರವರು ಪರಿಶೀಲಿಸಿ ಮತ್ತು ಅವರ ಜೊತೆಯಲ್ಲಿ ಭೋಜನವನ್ನು ಮಾಡಿದರು.ವಿಜಯನಗರ ಜಿಲ್ಲೆಯಲ್ಲಿ ಕರೋನ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಕರೋನಾ ವಾರಿಯರ್ಸ್ ಗಳ ಜೊತೆಗೂಡಿ ತಾವು ಸಾಮಾಜಿಕ ಸೇವೆ ಸಲ್ಲಿಸುವುದರಲ್ಲಿ ಮುಂಚೂಣಿಯಲ್ಲಿರುತ್ತಾರೆ ..
ವರದಿ. ಮಂಜುನಾಥ್ ದೊಡ್ಡಮನಿ