ಕೋವಿಡ್-19,ಮಹಾಮಾರಿಗೆ ಬಲಿಯಾದ ಶಿಕ್ಷಕರ ಕುಟುಂಬದವರಿಗೆ ಎ. ಐ. ಡಿ. ಎಸ್.ಒ. ವಿದ್ಯಾರ್ಥಿ ಸಂಘಟನೆಯು ತೀವ್ರ ಸಂತಾಪ.”
ಬಳ್ಳಾರಿ.ವಿವಿಧ ಜಿಲ್ಲೆಗಳಲ್ಲಿ ಕೊರೊನಾ ಮಹಾ
ಮಾರಿಗೆ ತುತ್ತಾಗಿ ಮೃತಪಟ್ಟಿರುವ ಶಿಕ್ಷಕರ ಕುಟುಂ
ಬಡವರಿಗೆ ಎ. ಐ. ಡಿ. ಎಸ್.ಒ. ವಿದ್ಯಾರ್ಥಿ ಸಂಘ
ತನೆಯು ತೀವ್ರ ಸಂತಾಪ ಸೂಚಿಸಿದೆ.
ಕೊರೊನಾ ಮಹಾಮಾರಿಯ 2 ನೇ ಅಲೆಯು
ಇಡೀ ದೇಶದಲ್ಲಿ ಹಬ್ಬುತ್ತಿದ್ದು,ಜನರು ಅತ್ಯಂತ ಕಷ್ಟ
ದ ದಿನಗಳಲ್ಲಿ ಸಿಲುಕುವಂತಾಗಿದೆ. 2ನೇ ಅಲೆಯ
ಮುನ್ಸೂಚನೆ ಇದ್ದಾಗಿಯೂ ನಮ್ಮ ಸರ್ಕಾರಗಳು
ನಡೆಸಿದ ಚುನಾವಣೆ ಮತ್ತು ಧಾರ್ಮಿಕ ಕಾರ್ಯಗ
ಳ, ಪರಿಣಾಮವಾಗಿ ಸೋಂಕಿನ ಪ್ರಮಾಣ ಗಣನೀ
ಯವಾಗಿ ಹೆಚ್ಚಿದೆ. ಆಡಳಿತದ ಬೇಜವಾಬ್ದಾರಿತನ
ಮತ್ತು ಹದಗೆಟ್ಟ ಆರೋಗ್ಯ ವ್ಯವಸ್ಥೆಯಿಂದಾಗಿ ಸಾ
ವು ಮತ್ತು ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ
ಹೆಚ್ಚುತ್ತಿದೆ. ಶೈಕ್ಷಣಿಕ ಚಟುವಟಿಕೆ ಗಳು ಕೂಡ ಅ
ತಂತ್ರ ಗೊಂಡಿರುವ ಇಂತಹ ಪ್ರಕ್ಷುಬ್ಧ ಪರಿಸ್ಥಿತಿಯ
ಲ್ಲಿ ನಡೆಸಿದ ಚುನಾವಣೆ ಯ ಕಾರ್ಯಕ್ಕೆ ಸರ್ಕಾರ
ವು ನೇಮಿಸಿದ್ದ ಹಲವು ಶಿಕ್ಷಕರು ರೋಗಕ್ಕೆ ಬಲಿ
ಯಾಗಿರುವುದು ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ನಷ್ಟ
ವನ್ನುಂಟು ಮಾಡಿದೆ.
ಕರೊನಾದ ಮೊದಲನೆಯ ಅಲೆಯಿಂದಲೂ ಹಲ
ವಾರು ಕೋವಿಡ್ ಸಂಬಂಧಿತ ಕೆಲಸಗಳಲ್ಲಿ ನಿ
ಯೋಜನೆ ಗೊಂಡಿದ್ದ ಅನೇಕ ಶಿಕ್ಷಕರು ಯಾವ ಕ
ನಿಸ್ಟ ಸುರಕ್ಷತೆಯೂ ಸಿಗದೆ ಮಹಾಮಾರಿ ಗೆ ಬಲಿ
ಯಾಗಿರುವುದು ಬಹಳ ದುಃಖಕರ ಸಂಗತಿಯಾ
ಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಆರೋಗ್ಯ ಭದ್ರ
ತೆ ಮತ್ತು ಸುರಕ್ಷತೆಯನ್ನು ಒದಗಿಸಬೇಕು.ಹಾಗೂ
ಚುನಾವಣೆ ಕರ್ತವ್ಯದ ಸಮಯದಲ್ಲಿ ಮೃತಪಟ್ಟಿ
ರುವ ಶಿಕ್ಷಕರ ಕುಟುಂಬಕ್ಕೆ ಕೂಡಲೇ ಪರಿಹಾರ
ಒದಗಿಸಬೇಕು, ಅವರ ಮಕ್ಕಳ ಶಿಕ್ಷಣ ಮತ್ತು ಜೀ
ವನೋ ಪಾಯದ ಜವಾಬ್ದಾರಿ ಸರ್ಕಾರ ವಹಿಸ
ಬೇಕು, ಹಾಗೂ ಯಾವುದೇ ರೀತಿಯ ಸಂಕಷ್ಟ
ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಬೀರದಂ
ತೆ ಇನ್ನಾದರೂ ಸರಕಾರವು ಎಚ್ಚೆತ್ತು ಸರಿಯಾದ
ಕ್ರಮವನ್ನು ತೆಗೆದುಕೊಳ್ಳಬೇಕೆಂದು ಎ. ಐ. ಡಿ. ಎಸ್.ಒ. ವಿದ್ಯಾರ್ಥಿ ಸಂಘಟಣೆ ಆಗ್ರಹಿಸಿದೆ.
ಹೇಳಿಕೆ:.ಗುರಳ್ಳಿ ರಾಜ.ಜಿಲ್ಲಾಧ್ಯಕ್ಷರು.aidso.
ಬಳ್ಳಾರಿ
ರವಿಕಿರಣ್.ಜಿಲ್ಲಾಕಾರ್ಯದರ್ಶಿ.aidso.
ಬಳ್ಳಾರಿ.
ವರದಿಗಾರರು.ಎಂ.ಎಲ್.ವೆಂಕಟೇಶ್.ಬಳ್ಳಾರಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030