ವರದಿ.ಎಂ. ಎಲ್. ವೆಂಕಟೇಶ್
ಬಳ್ಳಾರಿ, ನಗರದ ವಿಮ್ಸ್ ಕ್ರೀಡಾಂಗಣವನ್ನು ಖಾಸಗಿ ಸಂಸ್ಥೆಗೆ ನೀಡಿರುವುದನ್ನು ವಿರೋಧಿಸಿ
ವಿವಿಧ ಸಂಘಟನೆಗಳ ನೇತೃತ್ವದಲ್ಲಿ ,ಹಾಗೂ ಸಾರ್ವಜನಿಕರು ಸೇರಿ ,ಭಾನುವಾರ ಪ್ರತಿಭಟನೆ
ನಡೆಸಿದರು.
ಈ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ
ಸೇರಿದ್ದ ಜನರು ,ಕ್ರೀಡಾಂಗಣವನ್ನು ಖಾಸ್ಗಿಸಂಸ್ಥೆಗೆ
ನೀಡಿರುವ ಕ್ರಮವನ್ನು ಖಂಡಿಸಿ ಆಕ್ರೋಶ ವ್ಯಕ್ತ
ಪಡಿಸಿದರು.
ಕರ್ನಾಟಕ ಜನ ಸೈನ್ಯಸಂಘಟನೆ ,ರಾಜ್ಯ ಘಟಕದ
ಅಧ್ಯಕ್ಷರಾದ ಕೆ.ಎರಿಸ್ವಾಮಿ ಮಾತನಾಡಿ,ಕಳೆದ 50
ವರ್ಷಗಳಿಂದ ಸುತ್ತಮುತ್ತಲಿನ ಪ್ರದೇಶದ ಜನರು
ಬೆಳಿಗ್ಗೆ ವಾಯು ವಿಹಾರಕ್ಕೆ ಈ ಕ್ರೀಡಾಂಗಣಕ್ಕೆ ಬ
ರುತ್ತಿದ್ದಾರೆ.ಈ ಪ್ರಾಂತದ ಜನರು ವಾಯು ವಿಹಾರ
ಕ್ಕೆ ಹೋಗಬೇಕೆಂದರೆ ತುಂಬಾ ದೂರ ಹೋಗಬೇಕಿ
ದೆ. ಅದರಲ್ಲೂ ಹಿರಿಯ ನಾಗರಿಕರಿಗೆ,ಮತ್ತುಅನಾ
ರೋಗ್ಯ ಜನರಿಗೆ ವಾಯು ವಿಹಾರಕ್ಕೆ ಹೋಗಲು ತೊಂದರೆ ಯಾಗುತ್ತಿದೆ,ಎಂದರು.
ಕ್ರಿಕೆಟ್ ಮಿನಿ ಸ್ಟೇಡಿಯಂ ನಿರ್ಮಾಣಕ್ಕೆ ಕೋಟೆ
ಪ್ರದೇಶದಲ್ಲಿ 5ಎ ಕೆರೆ ಜಮೀನು ನೀಡಿದೆ.
ಬಳ್ಳಾರಿ ಕ್ರೀಡಾಂಗಣ,ರೇಡಿಯೋ ಪಾರ್ಕ್,ಐ. ಟಿ. ಐ. ಕಾಲೇಜ್ ಮೈದಾನ,ಈ ಮೈದಾನಗಳನ್ನು ಖಾ
ಸಾಗಿ,ಸಂಸ್ಥೆಯವರು ಬಳಸಬಹುದು.
ಕ್ರೀಡಾಂಗಣವನ್ನು ಕೊಟ್ಟರೆ ನಾಗರೀಕರಿಗೆ ತುಂಬಾ
ತೊಂದರೆಯಾಗುತ್ತೆದೆ, ಕೂಡಲೇ ಹಿಂಪಡೆಯಬೇ
ಕು ,ಇಲ್ಲವಾದರೆ ಹೋರಾಟ ಮಾಡಲಾಗುವುದು.
ಎಂದು ಎಚ್ಚರಿಸಿದರು.
ಕಾಂಗ್ರೆಸ್ಸ್ ಮುಖಂಡರು ಹನುಮ ಕಿಶೋರ್ ಮಾ
ತನಾಡಿ,ಕುವೆಂಪು ನಗರ,ಮತ್ತು ಎಸ್.ಪಿ. ವೃತ್ತದ
ಪ್ರದೇಶದಲ್ಲಿ ವಾಸಿಸುವ ಜನರು ವಾವು ವಿಹಾರ
ಕ್ಕೆ ಈ ಕ್ರೀಡಾಂಗಣವನ್ನು ಅವಲಂಬಿಸಿದ್ದಾರೆ.ಸಾರ್ವಜನಿಕರಿಗೆ ಅನ್ಯಾಯ
ವಾಗದಂತೆ ,ಭಾವನೆಗಳಿಗೆ ಧಕ್ಕೆಯಾಗದಂತೆ ಕ್ರೀ
ಡಾಂಗಣ ವನ್ನು ಹಿಂಮಪಡೆಯಬೇಕು,ಇಲ್ಲವಾದ
ರೆ ಉಗ್ರಹಾರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂ
ದು,ಎಚ್ಚರಿಸಿದರು.
ಪ್ರತಿಭಟನೆ ಸ್ಥಳಕ್ಕೆ ಧಾವಿಸಿದ ,ವಿಮ್ಸ್ ಸೂಪರಿನ್
ಟೆoಡೆಂಟ್,ಮರಿರಾಜ್ ಮನವಿಯನ್ನು ಸ್ವೀಕರಿಸಿ
ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ತಿಲಿಸಿ
ದರು.ಅವರಭರವಸೆ ಮೇರೆಗೆ ಪ್ರತಿಭನೆಯನ್ನು
ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದರು.
ಪ್ರತಿಭಟನೆಯಲ್ಲಿ ,ಮೇಕಲ ಈಶ್ವರರೆಡ್ಡಿ,ಕೃಷ್ಣ,
ಗಾದಿಲಿಂಗಪ್ಪ. ನಾಗಭೂಷಣರಾವ್,ಗಂಗಣ್ಣ,
ಪ್ರಭಾಕರ ನಾಯ್ಡು,ಗೋಪಾಲ್ ರಾಮು,ಗುರಮ್
ಮೋಹನ್,ಹನುಮಂತ,ಮುತ್ಯಾಲ ಹಾಗೂಇನ್ನೂ ಮುಂತಾದವರು ಭಾಗವಹಿಸಿದ್ದರೂ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030