ವರದಿ. ಧನಂಜಯ್ ಹಡಗಲಿ
ಮೈಲಾರ: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ಇಂದು ನಡೆದ ಐತಿಹಾಸಿಕ ‘ಶ್ರೀ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ’ದಲ್ಲಿ ಗೊರವಯ್ಯ ನುಡಿಯುವ ಭವಿಷ್ಯ ಕೇಳಲು ಸಾಕಷ್ಟು ಸಂಖ್ಯೆಯಲ್ಲಿ ಜನರು ನೆರೆದಿದ್ದರು.
ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಬಿಲ್ಲನೇರಿ ಗೊರವಯ್ಯ ಕಾರ್ಣಿಕ ವಾಣಿ ನುಡಿದಿದ್ದು, ಮುತ್ತಿನರಾಶಿ ಮೂರು ಭಾಗ ಆದಿತಲೆ ಪರಾಕ್ ಎಂದರು. ಅಂದ್ರೆ ಈ ಬಾರಿ ರಾಜ್ಯ ರಾಜಕಾರಣ ಮೂರು ಭಾಗ ಆಗುತ್ತೆ. ರೈತರು ಬೆಳೆದ ಬೆಳೆ ಕೂಡ ಮೂರು ಪಾಲಾಗುತ್ತೆ ಎಂದು ಕಾರ್ಣಿಕ ವಿಶ್ಲೇಷಿಸಲಾಗಿದೆ.ಐತಿಹಾಸಿಕ ಮೈಲಾರದಲ್ಲಿ ಮೈಲಾರಲಿಂಗೇಶ್ವರನ ಕಾರ್ಣಿಕ ನಡೆಯುತ್ತೆ.
ಈ ಕಾರ್ಣಿಕೆಯನ್ನ ಕೇಳಲು ಸಾವಿರಾರು ಜನ ಸೇರ್ತಾರೆ. ಅಂದ್ಹಾಗೆ, ಗೋರವಯ್ಯ ನುಡಿಯುವ ಈ ಕಾರ್ಣಿಕೆಯನ್ನ ವರ್ಷದ ಭವಿಷ್ಯವಾಣಿಯೆಂದೇ ನಂಬಲಾಗುತ್ತೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030