ತುರ್ವಿಹಾಳ ಠಾಣೆ ನೂತನ ಪಿಎಸ್ಐ ಚಂದ್ರಪ್ಪ ಹೆಚ್ ಅವರಿಗೆ ಡಿ.ಎಸ್.ಎಸ್ ಕಾದ್ರೊಳ್ಳಿ ಸಂಘಟನೆಯ ಕಾರ್ಯಕರ್ತರಿಂದ ಸನ್ಮಾನ ಮಾಡಲಾಯಿತು. ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ತುರ್ವಿಹಾಳ್ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ ಪಿಎಸ್ಐ ಚಂದ್ರಪ್ಪ. ಹೆಚ್.
ಅವರಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ಧ್ವನಿ ಚಂದ್ರಕಾಂತ್ ಕಾದ್ರೊಳ್ಳಿ ಸಂಘಟನೆಯ ಕಾರ್ಯಕರ್ತರು ಶಾಲು ಮತ್ತು ಹೂ ಮಾಲೆ ಹಾಗೂ ಭುದ್ದ. ಬಸವ ಅಂಬೇಡ್ಕರ್ ರವರುಗಳ ಫೋಟೋ ಕೊಡುವುದರ ಮುಖಾಂತರ ಸನ್ಮಾನಿಸಿ ಸ್ವಾಗತಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿಎಸ್ಐ ಅವರು ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆದಬಗ್ಗೆ ಮಾಹಿತಿ ಇದ್ದರೆ ತಕ್ಷಣ ಪೊಲೀಸ್ ಇಲಾಖೆಗೆ ತಿಳಿಸಬೇಕು ಗ್ರಾಮೀಣ ಭಾಗದಲ್ಲಿ ಯಾವುದೇ ಗುಂಪು ಘರ್ಷಣೆಗಳು ನಡಿಯದಂತೆ ಸಾರ್ವಜನಿಕರಿಗೆ ಸಹೋದರ ಭಾವನೆಯಿಂದ ಬದುಕುವಂತೆ ತಿಳಿ ಹೇಳಬೇಕು.
ಸಂಘಟಕರು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಅನ್ನುವ ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಹಂಪನಾಳ ತುರ್ವಿಹಾಳ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಸ್ಪೃಶ್ಯತೆ ಅತ್ಯಂತ ಗಣನೀಯ ಪ್ರಮಾಣದಲ್ಲಿದ್ದು ದಲಿತ ಸಮುದಾಯಗಳು ಅತ್ಯಂತ ಹೀನಾಮಾನವಾಗಿ ಬದುಕುತ್ತಿವೆ. ಗುಡಿ ಗುಂಡಾರ ಹೋಟೆಲ್. ಕಟಿಂಗ್ ಶಾಪ್ ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ದಲಿತರಿಗೆ ಪ್ರವೇಶವಿಲ್ಲ. ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ. ಮರಳು ದಂದೆ. ಜೂಜು. ಮಟ್ಕಾ ಸೇರಿದಂತೆ ಅಕ್ರಮ ಚಟುವಟಿಗೆಗಳು ಎಗ್ಗಿಲ್ಲದೆ ನಡೆಯುತ್ತವೆ. ಈ ಕುರಿತು ಪ್ರಶ್ನೆ ಮಾಡಿದ ದಲಿತ ನಾಯಕರ ಮೇಲೆ ಸುಳ್ಳು ಕೇಸು ದಾಖಲಿಸುವುದು ದಲಿತ ನಾಯಕರ ಆತ್ಮ ಸ್ಥೈರ್ಯ ಕುಗ್ಗಿಸುವುದು. ದಲಿತ ಸಮುದಾಯದ ಪರವಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರುವ ದಲಿತ ನಾಯಕರ ಮೇಲೆ ಸುಳ್ಳು ಕೇಸು ಹಾಕಿ ಅವರನ್ನು ರೌಡಿ ಶೀಟರ್ ಮಾಡಿದ ಎಷ್ಟೋ ಪ್ರಕರಣಗಳು ಸಿಂಧನೂರು ತಾಲ್ಲೂಕಿನಲ್ಲಿ ನಾವುಗಳು ನೋಡಬಹುದಾಗಿದೆ. ತಮ್ಮ ಪ್ರಾಮಾಣಿಕ ಹೋರಾಟದಿಂದ ದಲಿತರ ಮನೆಯಲ್ಲಿ ಫೋಟೋ ಹಾಕಿಸಿಕೊಂಡು ಪೂಜೆ ಮಾಡಿಸಿಕೊಳ್ಳಬೇಕಾದ ದಲಿತ ಹೋರಾಟಗಾರರು ಪೊಲೀಸ್ ಠಾಣೆಯ ರೌಡಿ ಶೀಟರ್ ಬೋರ್ಡನಲ್ಲಿ ತಮ್ಮ ಫೋಟೋ ಹಾಕಿಸಿಕೊಂಡು ಹರಕು ಬಟ್ಟೆ ಮುರುಕ ಕೋಲು ಹಿಡಿದು ಜೀವನ ಸವೆಸಿದ್ದಾರೆಂದು ನೋವಿನಿಂದ ನುಡಿದರು.
ಈ ಸಂದರ್ಭದಲ್ಲಿ ಬಾಲಸ್ವಾಮಿ ತಿಡಿಗೋಳ. ಗುರುನಾಥ ತಿಡಿಗೋಳ . ಆಂಜನೇಯ ಗುಂಜಳ್ಳಿ. ಶ್ಯಾಮಿದ್ ಗುಂಜಳ್ಳಿ. ಜಂಬಣ್ಣ ಉಪ್ಪಲದೊಡ್ಡಿ . ಶರಣಪ್ಪ. ಮೈಬುಸಾಬ್ ಕಾಶಿಮ್ ಸಾಬ್ . ಗುಂಜಳ್ಳಿ ಉಪಸ್ಥಿತರಿದ್ದರು.
ವರದಿ. ಮಹಾಲಿಂಗ ಗಗ್ಗರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030