ಚಿತ್ರದುರ್ಗ: ಜಿಲ್ಲಾ ಮೊಳಕಾಲ್ಮೂರು ಪಟಣ್ಣದ ಖಾಸಗಿ ಬಸ್ ನಿಲ್ದಾಣದಲ್ಲಿ ಇಂದು ಜನ ಜಾಗೃತಿ ಬಿದಿ ನಾಟಕ ಪ್ರದರ್ಶನಕ್ಕೆ ಕೀರ್ತಿ ಶಿಕ್ಷಣ ಮತ್ತು ಸಾಮಾಜಿಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಪಟ್ಟಣ ಪಂಚಾಯಿತಿ ಸಂಯೋಗದಲ್ಲಿ ಇಂದು ಮೊಳಕಾಲ್ಮೂರು ಪಟ್ಟಣ ಪಂಚಾಯಿತಿಯಿಂದ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಇಂದು ಸ್ವಚ್ಛತೆ ಕುರಿತ ಜಾಗೃತಿ ಬೀದಿ ನಾಟಕ ಪ್ರದರ್ಶನ ನಡೆಯಿತು. ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವುದು ಎಲ್ಲರ ಜವಾಬ್ದಾರಿ. ಸ್ವಚ್ಛ ಪರಿಸರ ನಮ್ಮ ಆರೋಗ್ಯದ ಗುಟ್ಟು. ಪಟ್ಟಣದ ಎಲ್ಲಾ ವಾರ್ಡ್ ಗಳಲ್ಲೂ ನಿತ್ಯ ಕಸ ಹೊತ್ತೊಯ್ಯುವ ವಾಹನ ಸಂಚರಿಸಲಿವೆ. ಹಸಿ, ಒಣ ಕಸವನ್ನು ಬೇರ್ಪಡಿಸಿ ವಾಹನದಲ್ಲಿ ಹಾಕುವುದರಿಂದ ಪಟ್ಟಣವನ್ನು ಸುಂದಾರವಾಗಿ ಇಡಲು ಸಾಧ್ಯವಿದೆ. ಅಲ್ಲದೆ, ಸಾಂಕ್ರಾಮಿಕ ಕಾಯಿಲೆಗಳಿಂದ ದೂರವಿರಬಹುದು. ಬೀದಿ ನಾಟಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಪಟ್ಟಣ ಪಂಚಾಯಿತಿಯ ಸ್ವಚ್ಛ ಭಾರತ ಮಿಷನ್ ಯೋಜನೆ ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಮೊಳಕಾಲ್ಮೂರು ಪಟ್ಟಣವನ್ನು ಸ್ವಚ್ಛ, ಸುಂದರ ಹಾಗೂ ಹಸಿರಿನಿಂದ ಕಂಗೊಳಿಸುವಂತೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಬಿದಿ ನಾಟಕ ಪ್ರದರ್ಶನ ಕಾರ್ಯಕ್ರಮ ಮಾಡಲಾಯಿತು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಯ ಹೆಲ್ತ್ ಆಫೀಸರ್ ಶ್ರೀನಿವಾಸ್, ಕಲಾವಿದರಾದ ಕೆಂಚಮಲ್ಲನಹಳ್ಳಿ ಸುರೇಶ, ಮಲ್ಲೂರಹಳ್ಳಿ ದುರುಗೇಶ್, ಹಂಪಣ್ಣ, ರೇಖಲಗೆರೆ ಮಲ್ಲೇಶ್, ಚಿನ್ನೋಬನಹಳ್ಳಿ ಬಾಬು, ಗಂಗಮ್ಮ, ಸೇರಿದಂತೆ ಇತರರಿದ್ದರು ಉಪಸ್ಥಿತರಿದ್ದರು…
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030