ಚಿತ್ರದುರ್ಗ: ನಾಯಕನಹಟ್ಟಿ ಪಟ್ಟಣದಲ್ಲಿ ಇಂದು (ಜು,27) ಬೀಳ್ಕೊಡುಗೆ ಸಮಾರಂಭ. ಉಪ ತಹಶೀಲ್ದಾರ್ ಹುದ್ದೆಯಿಂದ ಬಡ್ತಿ ಹೊಂದಿ ಕೂಡ್ಲಿಗಿ ತಾಲ್ಲೂಕಿನ ತಹಶೀಲ್ದಾರ್ ಆಗಿ ವರ್ಗಾವಣೆಗೊಂಡಿರುವ ಡಿ.ಟಿ. ಜಗದೀಶ್ ಅವರನ್ನು ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಹಾಗೂ ನೂತನ ತಹಶೀಲ್ದಾರ್ ಎನ್. ರಘುಮೂರ್ತಿ ರವರಿಗೆ ಅಭಿನಂದಿಸಿದರು. ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಮಠದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಚಳ್ಳಕೆರೆಗೆ ನೂತನವಾಗಿ ಅಧಿಕಾರ ವಹಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ತಹಶೀಲ್ದಾರ್ ಎನ್. ರಘುಮೂರ್ತಿ ರವರಿಗೆ ನಾಯಕನಹಟ್ಟಿ ಸರ್ಕಾರಿ ನೌಕರರು ಸನ್ಮಾನಿಸಿ ಅಭಿನಂದಿಸಿದರು. ನಾಯಕನಹಟ್ಟಿ ನಾಡ ಕಚೇರಿಯಲ್ಲಿ ಉಪ ತಹಶೀಲ್ದಾರ್ ಆಗಿ 9 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ವಿಜಯನಗರ (ಬಳ್ಳಾರಿ) ಜಿಲ್ಲೆ ಕೂಡ್ಲಿಗಿ ತಾಲ್ಲೂಕು ತಹಶೀಲ್ದಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಿ.ಟಿ, ಜಗದೀಶ್ ರವರಿಗೆ ಶಾಲು ಹೊಂದಿಸಿ ಫಲ, ಪಷ್ಟಗಳನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎನ್.ಟಿ, ಕೋಡಿ ಭೀಮರಾಯ ಪ್ರಭಾರ ಉಪ ತಹಶೀಲ್ದಾರ್ ಚೇತನ್ ಕುಮಾರ್, ಪಿಎಸ್ಐ ಮಹೇಶ್ ಲಕ್ಷಣ ಹೊಸಪೇಟೆ, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ, ಉಮಾ, ಪುಷ್ಪಲತಾ,
ಶಂಕ್ರಪ್ಪ ಹರೀಶ್, ಜೈರಾಮ್, ದೇವಸ್ಥಾನದ ದ್ವಿತೀಯ ದರ್ಜೆ ಸಹಾಯಕ ಸತೀಶ್, ದೇವಸ್ಥಾನ ಸಿಬ್ಬಂದಿಗಳು, ಊರಿನ ಮುಖಂಡರು, ಪಟ್ಟಣ ಪಂಚಾಯಿತಿ ಸಿಬ್ಬಂದಿ ಇನ್ನಿತರರು ಉಪಸ್ಥಿತರಿದ್ದರು…
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030