ಮೊಳಕಾಲ್ಮುರು: ಚಿತ್ರದುರ್ಗ ಮಾಚಿದೇವ ಸಂಸ್ಥಾನ ಮಠದ ಶ್ರೀಬಸವ ಮಾಚಿದೇವ ಶರಣರು ಪಟ್ಟಣಕ್ಕೆ ಭೇಟಿ.!

Listen to this article

ಚಿತ್ರದುರ್ಗ: ಜಿಲ್ಲಾ ಮೊಳಕಾಲ್ಮುರು ಪಟ್ಟಣದಲ್ಲಿ ಇಂದು ವಿವಿಧ ಕಾರ್ಯಗಳ ನಿಮಿತ್ತ ಚಿತ್ರದುರ್ಗ ಮಾಚಿದೇವ ಸಂಸ್ಥಾನ ಮಠದ ಶ್ರೀಬಸವ ಮಾಚಿದೇವ ಶರಣರು ಪಟ್ಟಣಕ್ಕೆ ಭೇಟಿ.! ಯಾವ ಸಮಾಜಕ್ಕಾದರೂ ಯುವ ಜನಾಂಗ ಅಮೂಲ್ಯ ಸಂಪತ್ತು. ತಪ್ಪು ಮಾರ್ಗಗಳಿಗೆ ಹೋಗದೆ ತಮ್ಮ ಉಜ್ವಲ ಭವಿಷ್ಯವನ್ನು ಸಮಾಜ ನಿರ್ಮಾಣಕ್ಕೆ ಮೀಸಲಿಡಬೇಕೆಂದು ಸ್ವಾಮಿಜಿ ಕರೆ ನೀಡಿದರು. ಪಟ್ಟಣದ ಸ್ವಕುಳಸಾಳಿ ಸಮಾಜದ ಗುರು ಪೀಠದ ಆವರಣದಲ್ಲಿ ಮಾಚಿದೇವಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಬಸವ ಮಾಚಿದೇವ ಶರಣರು ಮಡಿವಾಳ ಸಮಾಜದ ಕುರಿತು ಮಾತನಾಡಿದರು. ಬದುಕನ್ನು ಪವಿತ್ರವಾಗಿಸಬೇಕೆಂದರೆ ಜನರ ಸೇವೆ ಮಾಡಿ ಮುಕ್ತಿ ಪಡೆಯಬೇಕು. ಮಡಿ ವಾಳ ಸಮುದಾಯದವರು ಸಮಾಜದಲ್ಲಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದು, ಸಮುದಾಯದ ಜನತೆ ಸಮಾಜದ ಎಲ್ಲಾ ಕಾರ್ಯ ಕ್ರಮದಲ್ಲಿ ಭಾಗವಹಿಸಿ ನಮ್ಮ ಸಮಾಜದ ಹಿರಿಮೆಯನ್ನು ಸಮಾಜಕ್ಕೆ ತೋರಿಸಬೇಕಾಗಿದೆ ಎಂದು ತಿಳಿಸಿದರು. ಕೋವಿಡ್-19ನಿಂದ ಮೃತರಾದ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿ ಜೊತೆಗೆ ನೂತನವಾಗಿ ತಾಲ್ಲೂಕು ಮಡಿವಾಳ ಯುವಕರ ಸಂಘವನ್ನು ರಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರಾಧ್ಯಾಪಕ ಡಾ.ಬಸವರಾಜ, ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಬಿ.ರಾಮಪ್ಪ, ಕಾರ್ಯದರ್ಶಿ ಮಂಜುನಾಥ್, ಸಹಕಾರ್ಯದರ್ಶಿ ಶಿವಲಿಂಗಪ್ಪ, ಜನಸಂಸ್ಥಾನ ಸಂಸ್ಥೆಯ ವಿರೂಪಾಕ್ಷಪ್ಪ, ರೇಷ್ಮೆ ಇಲಾಖೆ ಹನುಮಂತಪ್ಪ, ದೊಡ್ಡಲಿಂಗಪ್ಪ, ಶಿಕ್ಷಕ ರಾದ ಗುರುಸ್ವಾಮಿ, ಗಂಗಾರೆಡ್ಡಿ ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.

ವರದಿ. ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend