ಚಿತ್ರದುರ್ಗ: ಮೊಳಕಾಲ್ಮುರು: ತಾಲೂಕಿನಲ್ಲಿ ಲಾಕ್ ಡೌನ್ ಸಮಯದಲ್ಲೂ ಕರ್ತವ್ಯ ಪ್ರಜ್ಞೆ ಮೆರೆದ ಕಾರ್ಯನಿರತ ಪತ್ರಕರ್ತರಿಗೆ ಕಿಟ್ ಕಾಂಗ್ರೆಸ್ ಮುಖಂಡ ಕರುನಾಡ ಜಿಯಾರವರಿಂದ ಆಹಾರ ಕಿಟ್ ವಿತರಿಸಿಲಾಯಿತು. ಈ ವೇಳೆ ಕಾಂಗ್ರೆಸ್ ಮುಖಂಡರಾದ ಡಾ. ಯೋಗೀಶ್ ಬಾಬು ಮಾತನಾಡಿ ಖಡ್ಗಕ್ಕಿಂತ ಲೇಖನಿ ಹರಿತವಾಗಿದ್ದು ಹಗಲು ರಾತ್ರಿ ಎನ್ನದೇ ಜನರಿಗೆ ಸುದ್ದಿ ತಲುಪಿಸುವ ಕೆಲಸ ಮಾಡುತ್ತಾ ಕೋವಿಡ್ ಸಮಯದಲ್ಲಿ ಕೂಡ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುವ ಪತ್ರಕರ್ತ ರ ಜವಾಬ್ದಾರಿ ನಿಜಕ್ಕೂ ದೊಡ್ದದು ಎಂದರು. ಆಯೋಜಕರಾದ ಕರುನಾಡ ಜಿಯಾಮಾತಾಡಿ ಕೋವಿಡ್ ನಿಂದಾಗಿ ಮೃತಪಟ್ಟ ಕುಟುಂಬಕ್ಕೆ ಆಸರೆಯಾಗಲು ಜವಾಹರ್ ಶಾಲೆಯಿಂದ ಮೃತ ಕುಟುಂಬದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದ್ಯಸ್ಯರಾದ ಅಬ್ದುಲ್ಲಾ ಪ್ರೇರಣಾ ಸಂಸ್ಥೆಯ ಜಯಲಕ್ಷ್ಮಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ದಾದಾಪಿರ್ ರಾಯಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾಂಗ್ರೆಸ್ ಮುಖಂಡರಾದ ನಾಗರಾಜ್ ಕಟ್ಟೆ ನಾಗಬುಷಣ್ ವಸಿಉಲ್ಲಾ ಚೌಡಪ್ಪ ಹಾಗೂ ಪತ್ರಕರ್ತ ರು ಭಾಗವಹಿಸಿದ್ದರು.
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030