ಚಿತ್ರದುರ್ಗ: ಮೊಳಕಾಲ್ಮುರು ಕೊರೊನಾ ಸೋಂಕಿನ 2ನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ಡೌನ್ ಆದೇಶ ಮಾಡಿ ಜನತೆಗೆ ಮನೆಯಲ್ಲೇ ಇರಿ ಎಂದು ಹೇಳಿ ದರೂ ಕೂಡ ಕೆಲವರು ಅನಗತ್ಯವಾಗಿ ಓಡಾಡುತ್ತಿದ್ದು, ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಪೊಲೀಸ್ ಅಧಿಕಾರಿಗಳು ತಮ್ಮ ಕುಟುಂಬಗಳನ್ನು ಬಿಟ್ಟು ಕೊರೊನಾ ಸೋಂಕಿನಿಂದ ತಮ್ಮ ಪ್ರಾಣದ ಹಂಗು ತೊರೆದು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಸಾರ್ವಜನಿಕರು ಮಾತ್ರ ಇದಕ್ಕೆ ಕ್ಯಾರೆ ಎನ್ನದೆ. ಅನಗತ್ಯವಾಗಿ ಸುಳ್ಳು ನೆಪ ಹೇಳಿ ಕೊಂಡು ಓಡಾಡುತ್ತಿದ್ದಾರೆ ಮತ್ತು ಜೊತೆಗೆ ವಾಹನಗಳನ್ನು ಸೀಜ್ ಮಾಡಿದರೂ ಕೂಡ ಓಡಾಡುತ್ತಿದ್ದಾರೆ. ಪಟ್ಟಣದ ಬಸ್ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಗಳು ಆರೋಗ್ಯ ಸಹಾಯಕರ ನೆರವಿನಿಂದ ಅನಗತ್ಯವಾಗಿ ಓಡಾಡುತ್ತಿದ್ದವರನ್ನು ತಡೆದು ಕೊರೊನಾ ಪರೀಕ್ಷೆ ನಡೆಸಲು ಗಂಟಲಿನ ದ್ರವ ಶೇಖರಣೆ ಮಾಡಿ ಲ್ಯಾಬ್ಗೆ ಕಳುಹಿಸಲಾಗಿದೆ. ಈ ಸಂದರ್ಭದಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಎಂ.ಕೆ. ಬಸವರಾಜ್, ಸಿಬ್ಬಂದಿ ರಮೇಶ್, ಭೀಮಣ್ಣ, ಆಶಾ ಕಾರ್ಯಕರ್ತೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು..
ವರದಿ.ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030