ಯಾಂತ್ರಿಕ ಬದುಕಿನ ತಂತ್ರಜ್ಞಾನಗಳು ತತ್ವಪದ, ಜಾನಪದವನ್ನು ಮರೆಸುತ್ತಿವೆ: ಮೀರಾ ಶಿವಲಿಂಗಯ್ಯ
ಯಾಂತ್ರಿಕ ಬದುಕು ಕಟ್ಟಿಕೊಂಡಿರುವ ಮನುಷ್ಯ ತಂತ್ರಜ್ಞಾನದ ಜೊತೆಗೂಡಿ ತತ್ವಪದ ಜಾನಪದಗಳಂತಹ ದೇಶಿ ಕಲೆಯನ್ನು ಮರೆಸುತ್ತಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಡಾ. ಮೀರಾ ಶಿವಲಿಂಗಯ್ಯ ಅವರು ಹೇಳಿದರು.
ಕರ್ನಾಟಕ ಜಾನಪದ ಅಕಾಡೆಮಿ, ಕ್ಷೀರಸಾಗರ ಮೀತ್ರಕೂಟ ಹಾಗೂ ಮಹಿಳಾ ಸರ್ಕಾರಿ ಕಾಲೇಜು ಸಹಯೋಗದಲ್ಲಿ ಇಂದು ದಿವಂಗತ ತಂಬೂರಿ ಜವರಯ್ಯ ಸ್ಮರಣಾರ್ಥ ತತ್ವಪದ ಜಾನಪದ ಗಾಯನ ವಿಚಾರ ಸಂಕಿರಣ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ಕೀಲಾರ ಕ್ಷೀರ ಸಾಗರ ಮಿತ್ರಕೂಟ ಅಧ್ಯಕ್ಷರಾದ ಕೆ. ಜಯಶಂಕರ್, ಮಂಡ್ಯ ತಾಲ್ಲೂಕು ಘಟಕ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷರಾದ ಕಾರಸವಾಡಿ ಮಹದೇವು, ಸಂಚಾಲಕ ಕೆ. ಎಂ ಕೃಷ್ಣೇಗೌಡ ಕೀಲಾರ, ಬೆಂಗಳೂರು ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ಎನ್ ನಮ್ರತ, ಮಂಡ್ಯ ಮಹಿಳಾ ಸರ್ಕಾರಿ ಕಾಲೇಜು ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಹೆಚ್ ಕೃಷ್ಣೇಗೌಡ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಕೆ ಚಂದ್ರಕಾಂತ್, ಜಾನಪದ ವಿದ್ವಾಂಸರು ನಿವೃತ್ತ ಪ್ರಾಂಶುಪಾಲರು ಪ್ರೊ. ವ.ನಂ.ಶಿವರಾಮು ಹಾಗೂ ಇನ್ನಿತರರು ಉಪಸ್ಥಿತರಿದ್ದರು…
ವರದಿ. ಸುರೇಶ್ ಮಂಡ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030