ಹೈಕಮಾಂಡ್ ಸಂದೇಶ ನೋಡಿಕೊಂಡು ತೀರ್ಮಾನ ಎಂದ ಯಡಿಯೂರಪ್ಪ….!!!

Listen to this article

ಬೆಳಗಾವಿ: ಹೈಕಮಾಂಡ್ ನಿಂದ ಸಂಜೆ ಸಂದೇಶ ಬರುತ್ತೆ. ಅದು ನಿಮಗೂ ಗೊತ್ತಾಗುತ್ತೆ. ಅಲ್ಲಿಂದ ಯಾವ ಸೂಚನೆ ಬರುತ್ತೋ ಕಾದು ನೋಡುತ್ತಿದ್ದೇನೆ. ಸಂದೇಶ ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಸಿಎಂ ಯಡಿಯೂರಪ್ಪ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಬಗ್ಗೆ ವಿಶ್ವಾಸ ಇದೆ. ಹೈಕಮಾಂಡ್ ಆದೇಶ ಪಾಲಿಸುತ್ತೇನೆ. ಸಂಜೆ ವೇಳೆಗೆ ಸಂದೇಶ ಬರುತ್ತೆ. ಹಾಗಾಗಿ ಈ ಬಗ್ಗೆ ಹೆಚ್ಚಿನ ಮಾತನಾಡೋಲ್ಲ. ನನ್ನ ಮೇಲೆ ಹೈಕಮಾಂಡ್ ಗೆ ವಿಶ್ವಾಸ ಇದೆ. ಯಾವ ನಿರ್ಧಾರ ತೆಗೆದುಕೊಳ್ಳುತ್ತೋ ಕಾದು ನೋಡೋಣ ಎಂದಿದ್ದಾರೆ.

ನನ್ನ ಪರ ವಿವಿಧ ಮಠಾಧೀಶರು ಯಾವುದೇ ಸಮಾವೇಶ ನಡೆಸುವ ಅಗತ್ಯ ಇಲ್ಲ ಎಂದು ಹೇಳುವ ಮೂಲಕ ಪದತ್ಯಾಗಕ್ಕೆ ಸಜ್ಜಾದರೋ ಯಡಿಯೂರಪ್ಪ ಇಲ್ಲವೋ ಹೈಕಮಾಂಡ್ ಸೂಚನೆ ಬಂದ ಬಳಿಕ ತಿರುಗೇಟು ಕೊಡ್ತಾರೋ. ತಾವು ದೆಹಲಿಗೆ ಹೋದಾಗ ಮಾಡಿಕೊಂಡ ರಾಜಕೀಯ ಒಪ್ಪಂದದ ಬಗ್ಗೆ ಮಾತನಾಡುತ್ತಾರೋ ಎಂಬ ಕುತೂಹಲ ಕೆರಳಿಸಿದೆ.

ಹುಬ್ಬಳ್ಳಿಯ ಪ್ರಹ್ಲಾದ್ ಜೋಷಿ ಜೊತೆ ಕಳೆದ ರಾತ್ರಿ ಒಂದೂವರೆ ಗಂಟೆಗೂ ಹೆಚ್ಚು ಹೊತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭೇಟಿ ಮಾಡಿದ್ದು ಮತ್ತಷ್ಟು ಕುತೂಹಲ ಗರಿಗೆದರುವಂತೆ ಮಾಡಿದೆ. ಇನ್ನು ಹುಬ್ಬಳ್ಳಿಯಲ್ಲಿ ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೆಂಗಳೂರಿಗೆ ಪ್ರಹ್ಲಾದ್ ಜೋಷಿ ತೆರಳಿದ್ದಾರೆ. ಸಿಎಂ ರೇಸ್ ನಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವುದು ಜೋಷಿ ಅವರ ಹೆಸರು. ಆದ್ರೆ, ಸಂಡೆ ಸಂಜೇ ಸಸ್ಪೆನ್ಸ್ ಏನು ಎಂಬುದು ಸಂಜೆ ವೇಳೆಗೆ ಗೊತ್ತಾಗಲಿದೆ ಎಂದು ದೆಹಲಿಯ ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.

ವರದಿ. ಮಹಾಲಿಂಗ ಗಗ್ಗರಿ ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend