ಮನೆ ಮನೆಗೆ ಉಚಿತ ಶುದ್ಧ ಕುಡಿಯುವ ನೀರು.ಸಂಜೀವಿನಿ ಟ್ರಸ್ಟ್ ವತಿಯಿಂದ 5 ಸಾವಿರ ನೀರಿನ ಕ್ಯಾನ್ ಗಳ ವಿತರಣೆ…!!!

Listen to this article

ಮಹದೇವಪುರ: ಬೆಂಗಳೂರು

ಮನೆ ಮನೆಗೆ ಉಚಿತ ಶುದ್ಧ ಕುಡಿಯುವ ನೀರು.ಸಂಜೀವಿನಿ ಟ್ರಸ್ಟ್ ವತಿಯಿಂದ 5 ಸಾವಿರ ನೀರಿನ ಕ್ಯಾನ್ ಗಳ ವಿತರಣೆ.

ಬೆಂಗಳೂರಿನ ಮಹದೇವಪುರ ಕ್ಷೇತ್ರದ ದೊಡ್ಡನೆಕ್ಕುಂದಿ ವಾರ್ಡ್ ನಲ್ಲಿ ಕುಡಿಯುವ ನೀರಿನ ಘಟಕಗಳು ಇಲ್ಲದೆ ಕಡೆ ವಾರಕ್ಕೊಮ್ಮೆ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡುವ ಹಿತದೃಷ್ಟಿಯಿಂದ ಸುಮಾರು 5 ಸಾವಿರ ನೀರಿನ ಕ್ಯಾನ್ ಗಳನ್ನ ಮಾಜಿ ಪಾಲಿಕೆ ಸದಸ್ಯೆ ತಮ್ಮ ಸಂಜೀವಿನಿ ಚಾರಿಟಬಲ್ ಟ್ರಸ್ಟ್ ಮೂಲಕ ವಿತರಣೆ ಮಾಡಿದರು.

ಬಿಜೆಪಿ ಫಲಾನುಭವಿಗಳ ಪ್ರಕೋಷ್ಠ ರಾಜ್ಯ ಸಮಿತಿ ಸದಸ್ಯರು ಹಾಗೂ ಸಂಜೀವಿನಿ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕರು ಹೂಡಿ ವಿಜಯ್ ಕುಮಾರ್ ರವರು
ದೊಡ್ಡನೆಕ್ಕುಂದಿ ವಾರ್ಡಿನ ಚಿನ್ನಪ್ಪನಹಳ್ಳಿಯ ವಿವಿಧ ಬಡಾವಣೆ, ಲೇಔಟ್, ಕಾಲೋನಿಯ ಜನರಿಗೆ ಸಂಜೀವಿನಿ ಚಾರಿಟಬಲ್ ಟ್ರಸ್ಟ್ ನ ಗ್ರಾಮೀಣ ಶುದ್ಧ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಉಚಿತ ಶುದ್ಧ ಕುಡಿಯುವ ನೀರು ತುಂಬಿದ ಕ್ಯಾನ್ ಗಳುನ್ನು ವಿತರಣೆ ಮಾಡಿದರು. ನೀರು ಖಾಲಿಯಾದ ನಂತರ ಟೊಲ್ ಫ್ರೀ ನಂಬರ್ ಗೆ ಕಾಲ್ ಮಾಡಿದರೆ ಉಚಿತವಾಗಿ ನೀರು ತಂದು ಹಾಕಲಾಗುತ್ತದೆ ಎಂದು ತಿಳಿಸಿದರು.

ನಂತರ ಮಾತನಾಡಿದ ಹೂಡಿ ವಿಜಯ್ ಕುಮಾರ್,
ಬೇಸಿಗೆಯ ಕಾಲ ಪ್ರಾರಂಭದಲ್ಲೇ ವಾರ್ಡಿನ ಜನರಿಗೆ ನೀರಿನ ಕೊರತೆ ನೀಗಿಸುವ ಸಲುವಾಗಿ, ಪ್ರತಿಯೊಂದು ಮನೆಮನೆಗೂ ನೀರು ಸಿಗಬೇಕೆಂದು ಸುಮಾರು 5 ಸಾವಿರ ಮನೆಗಳಿಗೆ ತಲಾ 30 ಲೀಟರ್ ತುಂಬುವ ಸಾಮಾರ್ಥ್ಯ ಹೊಂದಿರುವ ನೀರಿನ ಕ್ಯಾನ್ ಗಳನ್ನು ನೀಡಲಾಗಿದೆ, ಪ್ರತಿವಾರ ಕ್ಯಾನ್ ನೀಡಿರುವ ಮನೆಗೆ ನೀರು ಒದಗಿಸುವ ಕೆಲಸ ಮಾಡಲಾಗುವುದು ಅಗತ್ಯವಿದ್ದರೆ ಸಾರ್ವಜನಿಕರ ನಮ್ಮನ್ನು ಸಂಪರ್ಕಿಸಬಹುದು ಎಂದರು.

ಕೇವಲ ಚುನಾವಣೆಯ ಪ್ರಚಾರಕ್ಕಾಗಿ ಎಂದು ಸಮಾಜಸೇವೆ ಮಾಡಿಲ್ಲ ಮಾಡುವುದು ಇಲ್ಲ, ಟ್ರಸ್ಟ್ ನಿರ್ಮಿಸಿ ಕೋವಿಡ್ ಸಮಯದ ಕಷ್ಟಕಲದಿಂದಲ್ಲೂ ಜನರ ಕಷ್ಟನಷ್ಟತಿಳಿದು ಕೈಲಾದ ಸಹಾಯ ಮಾಡುತ್ತ ಬಂದಿದ್ದೇವೆ, ನಾವು ಮಾಡುವ ಕೆಲಸ ಜನರ ಮನಸ್ಸಿನಲ್ಲಿದೆ ಎಂದು ಹೇಳಿದರು.

ಇದೇವೇಳೆ ಮಾಜಿ ಪಾಲಿಕೆ ಸದಸ್ಯೆ ಶ್ವೇತ ವಿಜಯ್ ಕುಮಾರ್, ಸ್ಥಳೀಯ ಮುಖಂಡರು, ಮತ್ತಿತರರು ಇದ್ದರು…

ವರದಿ. ಮಂಜುನಾಥ್, ಎನ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend