ನಮ್ಮ ಸಮಸ್ಯೆ ಬಗೆಹರಿಸಲು ಶಿಫಾರಸು ಮಾಡಿ…!!!

Listen to this article

ನಮ್ಮ ಸಮಸ್ಯೆ ಬಗೆಹರಿಸಲು ಶಿಫಾರಸು ಮಾಡಿ : ಶಿವಕುಮಾರ ಘಾಟೆ
ಇಂದು ದಿನಾಂಕ 03/01/2022 ರಂದು ಔರಾದ ಪಟ್ಟಣದ ಆದರ್ಶ ಶಾಲೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ಔರಾದನ ಅಧ್ಯಕ್ಷರಾದ ಶಿವಕುಮಾರ ಘಾಟೆ ಯವರ ನೇತೃತ್ವದಲ್ಲಿ ಶ್ರೀ ಪ್ರಭು ಬಿ ಚವ್ಹಾಣ ಸಚಿವರು ಪಶು ಸಂಗೋಪನೆ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ಔರಾದ ವತಿಯಿಂದ ನೌಕರರ ವಿವಿಧ ಬೇಡಿಕೆಗಳಾದ 1.ಕೇಂದ್ರ ಸರ್ಕಾರಿ ನೌಕರರ ಸರಿಸಮಾನವಾದ ವೇತನ ಮತ್ತು ಭತ್ಯೆ ಪಾವತಿಸುವುದು, 2.ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ತರುವುದು,3. ಖಾಲಿ ಹುದ್ದೆಗಳು ಭರ್ತಿ ಮಾಡುವುದು, 4. ಶಿಕ್ಷಕರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಪತ್ರ ಸಲ್ಲಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಬೇಡಿಕೆಗಳ ಈಡೇರಿಕೆಗಾಗಿ ಶಿಫಾರಸ್ಸು ಮಾಡಲು ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ಸರಕಾರಿ ನೌಕರರ ತಾಲ್ಲೂಕ ಅಧ್ಯಕ್ಷರಾದ ಶಿವಕುಮಾರ ಘಾಟೆ ಮಾತನಾಡಿ ಸರಕಾರದ ಕೆಲಸ ದೇವರ ಕೆಲಸವೆಂಬಂತೆ, ಕೊರೊನಾ ಎಂಬ ಮಹಾಮಾರಿ ಬಂದ ಸಂದರ್ಭದಲ್ಲಿಯೂ ಸಹ ತಮ್ಮ ಜೀವನದ ಬಗ್ಗೆ ಗಮನ ಕೊಡದೆ, ತಮ್ಮ ಕಾರ್ಯ ನಿರ್ವಹಿಸಿದ್ದಾರೆ,ಅದಕ್ಕಾಗಿ ನಮ್ಮ ಸಮಸ್ಯೆ ಪರಿಹರಿಸಲು ಪ್ರಮಾಣಿಕ ಪ್ರಯತ್ನ ಮಾಡಬೆಕು. ಎಂದರು ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು…

ವರದಿ. ಸುನಿಲ್.ಮೆಟ್ರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend