08/07/2021 ರಂದು ಬೀದರ ಜಿಲ್ಲಾ ಪಂಚಾಯತ ಸಂಭಾಂಗಣದಲ್ಲಿ ಪ್ರಗತಿ ಪರಿಶಿಲನದ ಸಭೆಯಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ ಇಲಾಖೆಯ ಸಚಿವರಾದ ಶ್ರೀ ಈಶ್ವರಪ್ಪರವರಿಗೆ ಚಿಟ್ಟಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮೇಶ್ ಬಿರಾದರ ಅವರು ಸಚಿವರಿಗೆ ಕೋರೊನಾ ನಿಯಂತ್ರಣ ಮಾಡುವಸಲುವಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಕಮಿಟಿ ಮಾಡಲಾಗಿತು. ಅದರಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಅದರ ಅಧ್ಯಕ್ಷರು ಕಮಿಟಿಯ ಅಧ್ಯಕ್ಷರಾಗಿದ್ದು ,ಗ್ರಾಮ ಪಂಚಾಯತ ಸದಸ್ಯರು ಕಮಿಟಿಯ ಸದಸ್ಯರಾಗಿರುತ್ತಾರೆ. ಸರ್ಕಾರದ ಗ್ರಾಮ ಪಂಚಾಯತ ಸಿಬ್ಬಂದಿ ವರ್ಗದವರನ್ನು ಕೊರೊನಾ ವಾರಿಯಸ್೯ ಎಂದು ಘೊಸಿಸಿದ ನೀವು ಈ ಟಾಸ್ಕ್ ಫೋರ್ಸ್ ಕಮಿಟಿಯವರನ್ನು ಸಹ ಕೊರೊನಾ ವಾರಿಯಸ್೯ಗಳೆಂದು ಘೋಷಿಸಿ, ಕೊರೊನಾ ದಿಂದ ಮ್ರತ ಪಟ್ಟ ಟಾಸ್ಕ್ ಫೋರ್ಸ್ ಕಮಿಟಿಯ ಅಧಕ್ಷರಿಗೆ ಮತ್ತು ಸದಸ್ಯರಿಗೆ ಸರಕಾರ ಪರಿಹಾರ ಒದಗಿಸಬೇಕೆಂದು ಮನವಿ ಸಲ್ಲಿಸಿದರು.
ವರದಿ: ಪ್ರಲ್ಹಾದ ಹೂಗೊಂಡ ಬಿದರ