ಅಂದಕಾರದಲ್ಲಿ ಮುಳುಗಿರೋ ತಹಶೀಲ್ದಾರ್,
ಮಹಲ್ ನ ಮಾಲೀಕನಿಗೆ ಬಕೆಟ್ ಹಿಡಿದು ಪುಲ್ ದರ್ಬಾರ್..
ಹೌದು ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಪಟ್ಟಣದಲ್ಲಿ ಕೊರೋಣಾಗೆ ಹೆದರಿಸಿ ಓಡಿಸುವ ಕೆಲಸ ಹಜಾರೆ ಟೇಕ್ಸ್ಟೆಲ್ ಮಹಲ್ ನಲ್ಲಿ ನಡೆದಿದೆ ನೋಡೋರಿಗು ಅಷ್ಟೆ ಅಲ್ಲ ಕೇಳೋರಿಗು ಮೂಜುಗುರ ಅನಿಸುತ್ತೀರಬಹು.ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಅಂತಾ ಒಳಗಡೆ ವ್ಯಾಪಾರ ವಿನಿಮಯ ನೋಡಿದ್ರೆ ಗೊತ್ತಾಗುತ್ತೆ ದಿನನಿತ್ಯ ನೂರಾರು ಜನರು ಸಾಮಾಜಿಕ ಅಂತರವಿಲ್ಲದೆ ವ್ಯಾಪಾರ ವಿನಿಮಯ ನಡೆಸುತ್ತಿದ್ದಾರೆ.ಅಷ್ಟೆ ಅಲ್ಲದೆ ಮಹಲ್ ನಲ್ಲಿ ಕೆಲಸ ಮಾಡೋರು ಕೂಡಾ ಮಾಸ್ಕ್ ದಿಕ್ಕರಿಸಿ ವ್ಯಾಪಾರ ಮಾಡುತ್ತಿದ್ದುದು ನಿಜ. ಯಾವುದೇ ಅಂತರ ಇಲ್ಲ ಸಾನಿಟೈಜರ್ ಮಾಸ್ಕ್ ಇಲ್ಲ.ಇದನ್ನೇ ಪ್ರಶ್ನೆ ಮುಂದೆ ಇಟ್ಟುಕೊಂಡು ತಹಶೀಲ್ದಾರರನ್ನು ಕೇಳಿದ್ರೆ ಅವರು ಕೊಡೋ ಉತ್ತರ.. ಸರಿ ನಾನು ನಮ್ಮ ಸಿಬ್ಬಂದಿಗೆ ಹೇಳಿ ಕಳಿಸ್ತಿನಿ ಅಂತಾ ಹೇಳಿ ಫೋನ್ ಇಟ್ಟು 15 ನಿಮಿಷದಲ್ಲಿ ಒಳಗಿರುವ ಜನರನ್ನು ಹೊರಸಾಗಿಸಲು ಮುಂದಾದರು.ಅಂದರೆ ಇದರ ಅರ್ಥ ಕುದ್ದಾಗಿ ಅಧಿಕಾರಿಗಳೇ ಶಾಮೀಲು ಇದ್ದಾರೆ ಎಂಬ ಪ್ರಶ್ನೆ ದೀರ್ಘವಾಗಿ ಮೂಡಿ ಬಂತು.ಮಾನ್ಯ ಶಾಸಕರು ಸಿದ್ದು ಸವದಿಯವರು ಹಗಲಿರುಳು ಕೊರೋಣ ಮುಖ್ತ ಮಾಡಲೆಂದು ಶ್ರಮಿಸುತ್ತಿದ್ದು .ಆದರೆ ಇಲ್ಲಿನ ಅಧಿಕಾರಿಗೆ ಆ ಪರಿದ್ನಾನವೆ ಇಲ್ಲ.ಬಕೆಟ್ ಹಿಡಿಯುವ ಕೆಲಸ ಮಾಡುತ್ತಿದ್ದಾರೆ.ಇನ್ನೂ ಮಹಲ್ ನ ಮಾಲೀಕನನ್ನು ಕೇಳಿದ್ರೆ ಸರ್ ನಮ್ದು ಬೆಳಗಿನ ಜಾವ 6ಗಂಟೆಯಿಂದ 10ಗಂಟೆ ವರೆಗೆ ಚಲಾವಣೆಯಲ್ಲಿ ಇರುತ್ತೆ ಅಂತಾರೆ ಮತ್ತೆ ಒಂದು ಸಾರಿ ಇಲ್ಲ ಸರ್ ಕಸಗುಡಿಸಲು ತೆಗೆದಿದ್ವಿ ಅಂತಾ ಬಹಳ ಮುಗ್ದನಂತೆ ಹೇಳುತ್ತಾರೆ.ಈ ಘಟನೆ ನಡೆದಿದ್ದು ನಿನ್ನೆದು ಮೊನ್ನೆದು ಅಲ್ಲ ಇವಾಗ ತಾನೇ 07/06/2021ರಂದು ನಡೆದಿರುವ ಗಟನೆ ಇದು ಇವರಿಗೆ ಪರ್ಮಿಷನ್ ಯಾರು ಕೊಟ್ಟರು ಮತ್ತು ಇವರಿಗೆ ಯಾರಿಂದ ಸಹಕಾರ ಇದೆ ಅನ್ನೋದು ತನಿಖೆಯ ನಂತರ ತಿಳಿದು ಬರಬೇಕಾಗಿದೆ.ಆದಷ್ಟು ಬೇಗ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಸೂಕ್ತವಾದ ತನಿಕೆ ಮಾಡಿ ಶಿಕ್ಷೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರಾ..? ಅನ್ನೋದನ್ನ ಕಾದು ನೋಡಬೇಕಾಗಿದೆ..
ವರದಿ.ಮಹಾಲಿಂಗ ಗಗ್ಗರಿ, ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030