ಮುಧೋಳ : ಬಾಗಲಕೋಟ ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್ ಸಿಗದೆ ಸಾಯುತ್ತಿರುವವರ ಸಂಖ್ಯೆ ಹೆಚ್ಚಿದೆ…!!!

Listen to this article

ಮುಧೋಳ : ಬಾಗಲಕೋಟ ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್ ಸಿಗದೆ ಸಾಯುತ್ತಿರುವವರ ಸಂಖ್ಯೆ ಹೆಚ್ಚಿದೆ. ಆಕ್ಸಿಜನ್ ಬೆಡ್ ಸಿಗದೆ ಇಂದು ಬೆಳಿಗ್ಗೆ ಮುಧೋಳ ತಾಲ್ಲೂಕು ಆಸ್ಪತ್ರೆ ಬಾಗಿಲು ಬಳಿ ಸೋಂಕಿತ ಒಬ್ಬರು ಸಾವಿಗೀಡಾಗಿದ್ದಾರೆ. ತಿಮ್ಮಣ್ಣ ಬಂಡಿವಡ್ಡರ (34) ಮೃತ ಯುವಕ. ಇವರು ಮಾಲಿಂಗಪುರ ಬಾರ್ ಒಂದರಲ್ಲಿ ಮ್ಯಾನೇಜರ್ ಆಗಿದ್ದರು. ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕುನ್ನಾಳ ಗ್ರಾಮದ ತಿಮ್ಮಣ್ಣ ಬಂಡಿವಡ್ಡರ ಅವರು ಈ ಹಿಂದೆ ಮುಧೋಳ ಕೋವಿಡ್ ಸೆಂಟರ್ನಲ್ಲಿನಾಲ್ಕು ದಿನ ಚಿಕಿತ್ಸೆ ಪಡೆದು ಹೋಗಿದ್ದರು. ಬಳಿಕ ಹೂಮ್ ಐಸೋಲೇಶನಲ್ಲಿ ಇದ್ದರು. ನಿನ್ನೆ ಸಂಜೆ ಆರೋಗ್ಯದಲ್ಲಿ ಏರುಪೇರು ಆಗಿದ್ದು,  ಚಿಕಿತ್ಸೆಗಾಗಿ 4:30 ಕ್ಕೆ ಮುಧೋಳ ತಾಲೂಕು ಆಸ್ಪತ್ರೆಗೆ ಬಂದಿದ್ದರು. ಆಕ್ಸಿಜನ್ ಪ್ರಮಾಣ ಕಡಿಮೆ ಇದ್ದಿದ್ದರಿಂದ ಜಿಲ್ಲಾ ಆಸ್ಪತ್ರೆ ಕಳುಹಿಸಿದ್ದರು.  ಆದರೆ ಜಿಲ್ಲಾಸ್ಪತ್ರೆ, ಹಾಗು ಕುಮಾರೇಶ್ವರ ಆಸ್ಪತ್ರೆಯಲ್ಲೂ ಬೆಡ್ ಸಿಕ್ಕಿರಲಿಲ್ಲ. ಸೋಂಕಿತ ತಿಮ್ಮಣ್ಣ ಬಂಡಿವಡ್ಡರ ಮರಳಿ ಮುಧೋಳ ತಾಲೂಕ ಆಸ್ಪತ್ರೆಗೆ ಬಂದಿದ್ದರು. ಇಂದು ಬೆಳಗ್ಗೆ ಮುಧೋಳ ತಾಲ್ಲೂಕು ಆಸ್ಪತ್ರೆ ಬಾಗಿಲಬಳಿ, ಬೆಡ್ ಸಿಗದೇ ಸೋಂಕಿತ ಮೃತಪಟ್ಟಿದ್ದಾರೆ.

ವರದಿ. ಹಜರತ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend