ತಾಳಿಕೋಟೆ: ತಾಲೂಕಿನ ಶಿವಪುರ ಗ್ರಾಮದಲ್ಲಿ ನೀರಿನ ಸಮಸ್ಯೆ…!!! ಕಣ್ಮುಚ್ಚಿ ಕುಳಿತ ಗ್ರಾಮ ಅಭಿವೃದ್ಧಿ ಅಧಿಕಾರಿ ಇದ್ದಾರಾ…? ಹಲವು ಬಾರಿ ಸಮಸ್ಯೆ ಬಗ್ಗೆ ಹೇಳಿದರು ಕ್ಯಾರೆ ಎನ್ನದ ಗ್ರಾಮಾಭಿರುದ್ದಿ ಅಧಿಕಾರಿ ಗ್ರಾಮಸ್ಥರ ಅಳಲು, ಶಿವಪುರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಹವ್ದು ಊರಿನಲ್ಲಿ ಮನೆ ಮನೆಗೆ ನೀರಿನ ನಲ್ಲಿ ಇದ್ದರು ಕೂಡ ಅಲ್ಲಿ ನೀರು ಬರುವದಿಲ್ಲ, ಆದ್ದರಿಂದ ಕಿಲೋಮೀಟರ್ ಗಟ್ಟಲೆ ದೂರ ಹೋಗಿ ನೀರು ತರುತ್ತಿದ್ದಾರೆ ಊರಿನ ಜನ. ಗ್ರಾಮಗಳಲ್ಲಿ ಕೆಲಸ, ಬೋಗುಸಿ ಬಿಟ್ಟು ನೀರು ತುಂಬುವದೇ ಒಂದು ಕೆಲಸವಾಗಿದೆ ಎನ್ನುತ್ತಾರೆ ಗ್ರಾಮಸ್ಥರು ಅಭಿರುದ್ದಿ ಅಧಿಕಾರಿ ನಿರ್ಲಕ್ಷ್ಯ ದಿಂದ ಇಂತಹ ಪರಿಸ್ಥಿತಿ ಉಂಟಾಗಿದೆ. ಇದರಿಂದ ಜನ, ಜಾನುವಾರುಗಳು ನೀರಿಗಾಗಿ ಪರದಾಡುವಂತಾಗಿದೆ.
ಅವೈಜ್ಞಾನಿಕ ಗುಂಡಿ ಅಗೆದು ಪೈಪ್ ಜೋಡನೆ ಮಾಡಿರುವದರಿಂದ ನೀರು ಪೂರೈಕೆಯಲ್ಲಿ ಕೊರತೆ ಕಾಣುತ್ತಿದ್ದು ಇದನ್ನು ಸರಿಪಡಿಸದ ಗ್ರಾಮಭಿರುದ್ದಿ ಅಧಿಕಾರಿ….! ಹಲವುಬಾರಿ ಸ್ಥಳೀಯರು ಗಮನಕ್ಕೆ ತಂದರು ಗ್ರಾಮಕ್ಕೆ ಭೇಟಿ ಕೊಡದ ಅಭಿರುದ್ದಿ ಅಧಿಕಾರಿ ಇನ್ನಾದರೂ ನೀರಿನ ಸಮಸ್ಯೆಕಡೆ ಗಮನ ಹರಿಸುತ್ತಾರಾ ಕಾದುನೋಡಬೇಕಿದೆ ಈ ಮೂಲಕ ಗ್ರಾಮಕ್ಕೆ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆಗೆ ಸ್ಯಾಸ್ವತ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಮಾಧ್ಯಮದ ಮೂಲಕ ಜಿಲ್ಲಾಧಿಕಾರಿ ಅವರಿಗೆ ಒತ್ತಾಯಿಸಿದರು…
ವರದಿ.ಎಚ್ಚರಿಕೆ ಕನ್ನಡ ನ್ಯೂಸ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030