ಜಾಜುರು ಪಂಚಾಯ್ತಿಯ ತಪ್ಪಾಗೊಂಡನಹಳ್ಳಿಯಲ್ಲಿ ಬಾರಿ ಮಳೆಗೆ ಮನೆಗಳಿಗೆ ನುಗ್ಗಿದ ನೀರು.
ತಪ್ಪಾಗೊಂಡನಹಳ್ಳಿಯಲ್ಲಿ ರಾತ್ರಿ ಸುರಿದ ಭಾರಿ ಮಳೆಗೆ ತೋರೆ ತುಂಬಿ ಹರಿದಿದ್ದು ಅಕ್ಕ ಪಕ್ಕದ ತೋಟಕ್ಕೆ ನೀರು ನುಗ್ಗಿದ್ದು ಕೈ ಬಂದ ಬೆಳೆ ಕೊಳೆಯುವ ಸ್ಥಿತಿ ಎದುರಾಗಿದೆ. ಮಳೆ ನೀರು ಮನೆಗಳಿಗೆ ನುಗ್ಗಿದ್ದು ಈರಣ್ಣನ ಮನೆ ಹಾಗೂ ಹೊನ್ನೂರುಸ್ವಾಮಿ ರವರ ಮನೆ ಜಲಾವೃತಗೊಂಡಿದ್ದು ರಾತ್ರಿ ಮಕ್ಕಳು ಮನೆಮಂದಿಯೆಲ್ಲ ನಿದ್ರೆ ಮಾಡದೇ ಮನೆಗೆ ನುಗ್ಗಿದ ನೀರನ್ನು ಹೊರಚೆಲ್ಲುವ ಕೆಲಸ ಮಾಡುವುದೇ ಆಗಿದೆ ಎಂದು ಹೇಳಿದರು. ಈರಣ್ಣನ ತೋಟ ಪೂರ್ತಿಯಾಗಿ ಜಲಾವೃತಗೊಂಡಿದ್ದು ಇತ್ತೀಚಿಗಷ್ಟೇ ಶೇಂಗಾ ಬೀಜಬಿತ್ತನೆ ಮಾಡಿದ್ದು ಬೆಳೆ ಕೈಗೆ ಸಿಗದಂತಾಗುವ ಪರಿಸ್ಥಿತಿ ಎದುರಾಗಿದೆ ಎಂದರು.
ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030