*ಗುಡೇಕೋಟೆ:ಸಾವಿನಲ್ಲೂ ಒಂದಾದ ಜನಮಾದ ಜೋಡಿ-ಮರಳಿ ಬಾರದೂರಿಗೆ ದಂಪತಿಗಳ ಪಯಣ*-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆ ಗ್ರಾಪಂ ವ್ಯಾಪ್ತಿ,ಅಪ್ಪೇನಹಳ್ಳಿ ಗ್ರಾಮ ವಾಸಿ ದಂಪತಿಗಳಿಬ್ಬರೂ ಸಾವಿನಲ್ಲೂ ಒಂದಾಗಿದ್ದಾರೆ.ಖಾಸಗಿ ಗುತ್ತಿಗೆದಾರ ಹಾಗೂ ಪಂಚಮಸಾಲಿ ಸಮಾಜದ ಹಿರಿಯರಾದ,ಅಂಗಡಿ ಪರಮೇಶ್ವರಪ್ಪ(65)ಹಾಗೂ ಅವರ ಪತ್ನಿ ಅಂಗಡಿ ವಾಮದೇವಮ್ಮ(60)ಇವರಿಬ್ಬರು.ಮೇ 24ರಂದು ಕೆಲವೇ ತಾಸುಗಳ ಅಂತರದಲ್ಲಿ ನಿಧನರಾಗಿದ್ದಾರೆ.
ಈ ಮೂಲಕ ಜನುಮಾದ ಜೋಡಿಗಳಿಬ್ಬರೂ ಒಟ್ಟಿಗೇ ಮರಳಿಬಾರದೂರಿಗೆ ಪಯಣ ಬೆಳಸಿದ್ದಾರೆ,ಈ ಮೂಲಕ ದಂಪತಿಗಳು ಇಹಲೋಕ ತ್ಯೆಜಿಸಿ ಶಿವಸಾಯುಜ್ಯ ಪಡೆದು ಆದರ್ಶ ದಂಪತಿಗಳೆಂದು ಎಲ್ಲರ ಗಮನ ಸೆಳೆದಿದ್ದಾರೆ.
ಮೇ24ರಂದು ಮಧ್ಯಹ್ನ ಅಂಗಡಿ ಪರಮೇಶ್ವರಪ್ಪ ಕೋವಿಡ್ ನಿಂದ ಮೃತಪಟ್ಟಿದ್ದಾರೆ,ಸಾಯಂಕಾಲ ಅವರ ಧರ್ಮ ಪತ್ನಿ ಅಂಗಡಿ ವಾಮದೇವಮ್ಮ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇವರು ತಮ್ಮ ಪತಿ
ಪರಮೇಶ್ವರಪ್ಪರವರ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಂಡಿದ್ದು,
ಆಗ ಅವರ ಆರೋಗ್ಯ ಸ್ಥಿತಿ ಸಹಜವಾಗಿತ್ತು.ಆದರೆ ಸಾಯಂಕಾಲ ಅವರು ತಮ್ಮ ನಿವಾಸದಲ್ಲಿದ್ದಾಗ ಅವರು ದಿಡೀರ್ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ..
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030