ಕ.ಮಾ.ಸಾ.ಹಿ.ರ.ವೇ ಕೊಪ್ಪಳ ಜಿಲ್ಲಾ ಪದಾಧಿಕಾರಿಗಳ ನೇಮಕ:-ಇಂದು ರಾತ್ರಿ 7.30 ಕ್ಕೆ ಮುನಿರಾಬಾದ್ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಮಾಹಿತಿ ಹಾಗೂ ಸಾರ್ವಜನಿಕ ಹಿತರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಇವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಮೆಡಿಕಲ್ ಮಾಫಿಯಾ ಕುರಿತಂತೆ ಅನೇಕ ವಿಷಯಗಳು ಚರ್ಚೆ ನಡೆಸಿ, ಕರ್ನಾಟಕ ಪ್ರವೇಟ್ ಮೆಡಿಕಲ್ ಎಸ್ಟ್ಯಾಬ್ಲಿಷ್ ಮೆಂಟ್ ಅಡಿಯ ಲ್ಲಿ ಪರವಾನಗೆ ಪಡೆಯದ ರಕ್ತ ಪರೀಕ್ಷಾ ಕೇಂದ್ರಗಳು,ಖಾಸಗಿ ಕ್ಲಿನಿಕ್ ಗಳು,ಮೆಟರ್ನಿಟಿ ಹೋಂ,ನರ್ಸಿಂಗ್ ಹೋಂಗಳು,ಖಾಸಗಿ ಎಕ್ಸ್ ರೇ ಲ್ಯಾಬ್,ಆರ್.ಎಂ.ಪಿ. ಡಾಕ್ಟರ್ ಗಳ ವಿರುದ್ದ ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ಸಕ್ಷಮ ಅಧಿಕಾರಿಗಳು ಮುಂದಾಗಬೇಕು ಹಾಗೂ ಮೆಡಿಕಲ್ ಸ್ಟೋರ್ ಗಳಲ್ಲಿ QP person ಕ್ವಾಲಿಫೈಡ್ ಪರ್ಸನ್ ಗಳೇ ಉಪಸ್ಥಿತರಿಬೇಕೆಂಬ ಕಾನೂನು ಇದ್ದರೂ ಅದನ್ನು ಕಡೆಗಣಿಸಿ ಆ ಸರ್ಟಿಪಿಕೇಟ್ ನ್ನು ತಿಂಗಳಿಗೆ ಇಂತಿಷ್ಟು ಅಂತ ಬಾಡಿಗೆ ರೂಪದಲ್ಲಿ ನೀಡಿರುವವರ ವಿರುದ್ದ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂಬ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ ಕರ್ನಾಟಕ ಮಾಹಿತಿ ಹಾಗೂ ಸಾರ್ವಜನಿಕ ಹಿತರಕ್ಷಣಾ ವೇದಿಕೆಯ ರಾಜ್ಯಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಕೊನೆಯಲ್ಲಿ ,ಕರ್ನಾಟಕ ಮಾಹಿತಿ ಹಾಗೂ ಸಾರ್ವಜನಿಕ ಹಿತರಕ್ಷಣಾ ಕೊಪ್ಪಳ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಎಲ್ಲರ ಒಮ್ಮತದಿಂದ ಈ ಕೆಳಕಂಡವರನ್ನು ನೇಮಕ ಮಾಡಿದರು. ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ಶರಣಪ್ಪ ಎನ್ ಮಾಲಿಪಾಟೀಲ್,ಉಪಾಧ್ಯಕ್ಷರಾಗಿ ಮಂಜುನಾಥ ಎನ್ ದೊಡ್ಡಮನಿ,ಗೌರವಾಧ್ಯಕ್ಷರಾಗಿ ಮಸ್ತಾನ್,ಕಾರ್ಯದರ್ಶಿಯಾಗಿ ಅಶೋಕ್,ಖಜಾಂಚಿಯಾಗಿ ರಾಮಾಲೆಪ್ಪ,ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸಂಗೀತಾ,ಅಪ್ಪಣ್ಣ,ಮಹಾಂತೇಶ ಹಾಗೂ ಜಾವೇದ್ ನೇಮಕ ಮಾಡಲಾಯಿತು…
ವರದಿ. ಸಂಗೀತ ಕೊಪ್ಪಳ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030