ವರದಿ. ವಿರೇಶ್ ವರದಿಗಾರರು
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗಡಿ ಗ್ರಾಮ ಮಾಳ್ಳೇಹಳ್ಳಿ ರೈತರು ಒಕ್ಕಣೆ ಮಾಡಿ ಕಣದಲ್ಲಿ ಶೇಖರಣೆ ಮಾಡಿಟ್ಟಿದ್ದ ಮೇವಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ ಹೊತ್ತಿ ಉರಿಯುತ್ತಿತ್ತು ಇದನ್ನು ಗಮನಿಸಿದ ಗ್ರಾಮಸ್ಥರು ಎಲ್ಲರೂ ಒಟ್ಟುಗೂಡಿ ಬೆಂಕಿಬಿದ್ದ ಮೇವಿನ ಬಣವೆಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆಮಾಡಿ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಬಂದು ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.
ಮಾಳೆಹಳ್ಳಿಯ ಶಂಕ್ರಪ್ಪ ಎಂಬುವರಿಗೆ ಸೇರಿದ ಮೇವಿನ ಬಣಿವೆ ಇದಾಗಿದ್ದು. ಅಪಾರ ಪ್ರಮಾಣದ ಮೇವು ನಷ್ಟವಾಗಿದೆ ಮುಂದಿನ ದಿನದಲ್ಲಿ ಬೇಸಿಗೆ ಬರುತ್ತಿದ್ದು ಜಾನುವಾರುಗಳಿಗೆ ಮೇವು ತೊಂದರೆಯಾಗದಂತೆ ಸಂಗ್ರಹ ಮಾಡಿಟ್ಟಿದ್ದ ಅಪಾರ ಪ್ರಮಾಣದ ಮೇವು ನಷ್ಟವಾಗಿದೆಯೆಂದು ಶಂಕ್ರಪ್ಪ ನೋವಿನಿಂದ ಹೇಳಿದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030