ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ.
ಸ್ವಾಮಿ ವಿವೇಕಾನಂದ ನವರ ಜನ್ಮದಿನಾಚರಣೆ ಹಿರೇಕುಂಬಳಗುಂಟೆ:-ಈ ದೇಶದ ಮಹತ್ವದ ಸಂಪತ್ತು:- ಮುಖ್ಯಶಿಕ್ಷಕ ಶಾಮಸುಂದರಸಪಾರೆ
ಶಕ್ತಿಯೇ ಈ ದೇಶದ ಮಹತ್ವದ ಸಂಪತ್ತು ಏಳಿ ಎದ್ದೇಳಿ ಗುರಿ ತಲುಪುವವರೆಗೂ ಕಾರ್ಯಪ್ರವೃತ್ತರಾಗಿರಿ. ಎಂಬುದರೊಂದಿಗೆ ದೇಶದ ಧರ್ಮದ ಶಕ್ತಿಯನ್ನು ಎತ್ತಿಹಿಡಿದ. ಭಾರತದ ಆಧ್ಯಾತ್ಮಿಕತೆಯ ಭವ್ಯ ಭಾರತ ನಿರ್ಮಾಣದ ಸಂಕಲ್ಪ ತೊಟ್ಟ ಅದಮ್ಯ ಚೇತನ ಸ್ವಾಮಿ ವಿವೇಕಾನಂದರವರು ಎಂದು.ಕಾನಹೊಸಹಳ್ಳಿ ಹೋಬಳಿಯಹಿರೇಕುಂಬಳಗುಂಟೆ ಗ್ರಾಮದ, ಸಾ. ಹಿ. ಪ್ರಾ ಶಾಲೆಯಲ್ಲಿ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರವರ ಜನ್ಮದಿನದ ಕಾರ್ಯಕ್ರಮದಲ್ಲಿಮುಖ್ಯಶಿಕ್ಷಕಶಾಮಸುಂದರ ಸಫಾರೆ ಮಾತನಾಡಿದರು. ಮಕ್ಕಳನ್ನು ಉದ್ದೇಶಿಸಿ ಸ್ವಾಮಿ ವಿವೇಕಾನಂದರವರ ತತ್ವಗಳನ್ನು ಅಳವಡಿಸಿಕೊಳ್ಳಿ
ಸ್ವಾಮಿ ವಿವೇಕಾನಂದರವರು ಯುವ ಶಕ್ತಿಯನ್ನು ಒಗ್ಗೂಡಿಸಿ ಯುವಶಕ್ತಿಗೆ ಸ್ಪೂರ್ತಿ ಯಾದವರು, ಶ್ರೇಷ್ಠ ಕೃತಿಗಳ ಮೂಲಕ, ಸನಾತನ ಧರ್ಮ, ವೇದಗಳು ಮತ್ತು ಜ್ಞಾನ ಶಾಸ್ತ್ರಕ್ಕೆ ಜಗತ್ತಿನಲ್ಲಿ ಹೆಚ್ಚಿನ ಖ್ಯಾತಿ ತಂದವರು. ನಾಡಿನ ಜನತೆಗೆ ಶಾಂತಿಮತ್ತು ಸಹೋದರತ್ವ ಸಂದೇಶ ನೀಡಿದರು.ಎಂದು ಈ ಸಂದರ್ಭದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ,ಮುಖ್ಯ ಶಿಕ್ಷಕ ಶಾಮಸುಂದರ ಸಪಾ ರೆ.ಶಿಕ್ಷಕರುಗಳಾದ ಮಂಜುನಾಥ್, ಬಸವರಾಜ, ಶರಣಯ್ಯ, ಹನುಮಂತರೆಡ್ಡಿ ,.ರಫೀಕ್,ಶಾರದಾ. ರೂಪ.ಸಾ ಹಿ ಪ್ರಾ ಶಾಲೆಯ ಸಿಬ್ಬಂದಿ ವರ್ಗ, ಎಸ್ಪಿಎಂ.ಸಿ ಅಧ್ಯಕ್ಷ-ಉಪಾಧ್ಯಕ್ಷ ಸದಸ್ಯರು,ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸ್ವಾಮಿ ವಿವೇಕಾನಂದ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು..
ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030