ಅಮರಶಿಲ್ಪಿ ಜಕಣಾಚಾರಿ ಎಂದೆಂದಿಗೂ ಅಜರಾಮರಪಂಪಾಪತಿ.
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಜಕಣಾಚಾರಿ ಜಯಂತಿ ಆಚರಿಸಲಾಯಿತು ನಾಡಿಗೆ ಶಿಲ್ಪಕಲೆಯನ್ನು ಧರೆಗಿಳಿಸಿದ ಅಮರ ಶಿಲ್ಪಿ ಜಕಣಾಚಾರಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬಿಸಿಎಂ ಹಿಂದುಳಿದ ಇಲಾಖೆಯ ಅಧಿಕಾರಿ ಪಂಪಾಪತಿ ಮಾತನಾಡಿ ಎಂದೆಂದಿಗೂ ಅಜರಾಮರ ಎಂದು ತಿಳಿಸಿದರು ಅವರು ಕೂಡ್ಲಿಗಿ ಪಟ್ಟಣದ ಹಿಂದುಳಿದ ವರ್ಗಗಳ ಇಲಾಖೆಯ ಕಾರ್ಯಾಲಯದಲ್ಲಿ ಇಂದು ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ಕಾರ್ಯಕ್ರಮವನ್ನು ಕೋವಿಡ್ ನಿಯಮ ಪಾಲನೆಯಂತೆ ಸರಳವಾಗಿ ಆಚರಿಸಿ ಮಾತನಾಡಿ ಶಿಲ್ಪಕಲೆಯನ್ನು ತಮ್ಮ ಕೈಚಳಕದ ಮೂಲಕ ನಾಡಿಗೆ ಮೆರಗು ನೀಡಿದ ಮಹಾನ್ ಶಿಲ್ಪಿ ಎಂದು ಅಭಿಪ್ರಾಯ ಪಟ್ಟರು. ನಿಲಯ ಮೇಲ್ವಿಚಾರಕರಾದ ಸಿ, ಅಂಜಿನಪ್ಪ ಮಾತನಾಡಿ ವಿದೇಶಿಗರು ನಮ್ಮ ನಾಡಿನ ಶಿಲ್ಪಕಲೆಯನ್ನು ನೋಡಿ ಬೆರಗಾಗುವಂತೆ ಮತ್ತು ನೋಡುಗರನ್ನು ಸೆಳೆಯುವಂತಹ ಕಲೆಯನ್ನು ಹೊಂದಿದ ನಮ್ಮ ನಾಡು ನಿಜಕ್ಕೂ ಪುಣ್ಯಭೂಮಿಯಾಗಿದೆ. ಇಂತಹ ಶಿಲ್ಪಕಲೆಗಳನ್ನು ನಿರ್ಮಿಸಿದ ಅಮರ ಶಿಲ್ಪಿ ಜಕಣಾಚಾರಿಯವರನ್ನು ಇಂದು ನಾವುಗಳು ಸ್ಮರಿಸುವ ಮೂಲಕ ಶಿಲ್ಪಕಲೆಗಳನ್ನು ಗೌರವದಿಂದ ಪೋಷಿಸಬೇಕಿದೆ ಎಂದರು. ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಮುಖಂಡರಾದ ಕೂಡ್ಲಿಗಿ ಕರಿಯಪ್ಪಾಚಾರಿ, ಶ್ರೀಧರಚಾರಿ, ಸಿ, ನಾಗರಾಜ್, ಮೌನೇಶ್ ಆಚಾರ್,ಬಡಿಗೇರ್ ನಾಗರಾಜ್, ತಾಲೂಕು ಕರ್ನಾಟಕ ಪತ್ರಕರ್ತರ ಸಂಘದ ಗೌರವ ಅಧ್ಯಕ್ಷರಾದ ಡಿ ಎಂ ಈಶ್ವರಪ್ಪ ಸಿದ್ದಾಪುರ ಖಾನಾಮಡುಗು ಮನೋಜ್ ಆಚಾರ್, ಮೊರಬದ ಪ್ರಕಾಶ್ ಆಚಾರ್, ಸೇರಿದಂತೆ ಇಲಾಖೆಯ ನಿಲಯ ಮೇಲ್ವಿಚಾರಕರಾದ ಕೆ, ಎನ್, ಸುಮಾ ಗೋವಿಂದಪ್ಪ, ಮೀನಾಕ್ಷಿಬಾಯಿ, ಸಿಬ್ಬಂದಿಗಳಾದ ವಡ್ಡಿನ ಅಂಜಿನಪ್ಪ, ಕೆ, ಮಾರುತಿ, ನಾಗರಾಜ, ಭರತ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು….
ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030