ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ.
ಹುಣಸೇ ಮರದ ಅಡಿಯಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಯನ್ನು ಸ್ಥಳಾಂತರಿಸಿ ಅಥವಾ ಮರದ ಕೊಂಬೆಗಳನ್ನು ಕತ್ತರಿಸಿ
ಕಾನಹೊಸಹಳ್ಳಿ ಪಟ್ಟಣದ ನಾಡ ಕಚೇರಿ ಮುಂಭಾಗದ ಸಾರ್ವಜನಿಕರು ಓಡಾಡುವ ರಸ್ತೆಯಪಕ್ಕದಲ್ಲಿ ವಿದ್ಯುತ್ ಪರಿವರ್ತಕ ಕ್ಕೆ ಹಾದು ಹೋಗಿರುವ ವಿದ್ಯುತ್ ತಂತಿಗಳು, ಹುಣಸೆ ಮರಕ್ಕೆ ತಾಕಿ ಕೊಂಡಿದ್ದು, ಗಾಳಿ ಬಂದ ತಕ್ಷಣ ವಿದ್ಯುತ್ ತಂತಿಗಳು ಮರಕ್ಕೆ ಬಡಿದು ಕಿಡಿಗಳು ಉತ್ಪತ್ತಿಯಾಗುತ್ತವೆ. ಕುಟುಂಬಗಳು ವಾಸಿಸುವ ಮನೆಯ ಮುಂದೆ ಹುಣಸೆ ಮರವಿದ್ದು, ಈ ವಿದ್ಯುತ್ ತಂತಿಗಳು ಹುಣಸೆ ಮರಕ್ಕೆ ತಾಕುತ್ತವೆ, ತಾಕಿದಾಗ ವಿದ್ಯುತ್ ಕಿಡಿಗಳು ಹಾರಿ ಮನೆಗಳ ಮೇಲೆಕಿಡಿಗಳು ಬೀಳುತ್ತವೆ, ವಿದ್ಯುತ್ ಪೂರೈಕೆಯಲ್ಲಿ ಸಹ ವ್ಯತ್ಯಾಸವಾಗುತ್ತದೆ, ಈ ವಿಚಾರದ ಬಗ್ಗೆ ಕೆಇಬಿ ಅಧಿಕಾರಿಗಳಿಗೆ ತಿಳಿಸಲಾಗಿದ್ದು ಯಾವುದೇ ಪರಿಣಾಮ ವಾಗಿಲ್ಲ, ಈಗಲಾದರೂ ಎಚ್ಚೆತ್ತುಕೊಂಡು ಇಲ್ಲಿ ಹಾಗುವ ಅನಾಹುತಗಳನ್ನು ತಪ್ಪಿಸಬೇಕೆಂದು ಗ್ರಾಮಸ್ಥರು ಅಧಿಕಾರಿಗಳಲ್ಲಿ ಮನವಿ ಮಾಡಿರುತ್ತಾರೆ…
ವರದಿ. ಡಿ. ಎಂ.ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030