ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿಯಮಿತ 4ನೇ ವಾರ್ಷಿಕ ಮಹಾಜನ ಸಭೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಯು ಗಂಗಾಧರಪ್ಪ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಈ ಸಭೆಗಳಲ್ಲಿ ಷೆರು ಪಾವತಿಸಿದ ಸದಸ್ಯತ್ವ ನೀಡಿ ಅನುಮೋದಿಸುವ ಬಗ್ಗೆ ಪಾಹಣಿ ನೀಡಿದ ರೈತರಿಗೆ ಎನ್.ಸಿ.ಎಲ್ ಅನುಮೋದನೆಗೆ ಕಳುಹಿಸುವ ಬಗ್ಗೆತಿಳಿಸಿದರು. ಕೆ.ಸಿ.ಸಿ ಸಾಲದ ಮಂಜೂರಾತಿಯ ಬಗ್ಗೆ, ಪಿಗ್ನಿ ಸಂಗ್ರಹದ ಬಗ್ಗೆ ಜಿ.ಡಿ.ಪಿ ಸಾಲದ ವಿತರಣೆ ಮತ್ತು ವಸೂಲತಿ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರು ತಿಪ್ಪೇಸ್ವಾಮಿ, ಸಂಘದ ನಿರ್ದೇಶಕರುಗಳು ಅಂಜಿನಪ್ಪ, ಗೋಕರ್ಣ, ಗಾಮಕ್ಕ, ಕೆ ತಿಪ್ಪೇಸ್ವಾಮಿ, ಗುರುಸ್ವಾಮಿ, ಮುನಿಯಪ್ಪ, ಮಂಜುಳಾ, ಓಬಕ್ಕ, ವೆಂಕಟೇಶ್ ಪಾಪಯ್ಯ, ಮುಖ್ಯ ಕಾರ್ಯ ನಿವಾರಕರು ಎನ್ ಓದ್ನೋಬಯ್ಯ, ಸೇರಿದಂತೆ ಸಂಘದ ಸಿಬ್ಬಂದಿ ವರ್ಗದವರು, ಸರ್ವ ಸದಸ್ಯರು ಉಪಸ್ಥಿತರಿದ್ದರು..
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030