ಕೂಡ್ಲಿಗಿ ತಾಲ್ಲೂಕು ವಿಧಾನಸಭಾ ಕ್ಷೇತ್ರದ
ಆಧುನಿಕ ಭಗೀರಥ ಹಿಂದುಳಿದ ಹಣೆಪಟ್ಟಿಯನ್ನು ಹೋಗಲಾಡಿಸಿದ ಶಾಸಕರು ಮತ್ತು ಜನಪ್ರಿಯ ನಾಯಕಜನರ ಮನಗಳಲ್ಲಿ ಜನ ನಾಯಕ ಎಂದೇ ಹೆಸರಾಗಿರುವ ಶ್ರೀ ಎನ್ ವೈ ಗೋಪಾಲಕೃಷ್ಣ 6 ಬಾರಿ ಶಾಸಕರಾಗಿ ಡೆಪ್ಯೂಟಿ ಸ್ಪೀಕರ್ ಆಗಿ
ನಂಜುಂಡಪ್ಪ ವರದಿ ಅನುಷ್ಠಾನದ ಅಧ್ಯಕ್ಷರಾಗಿ ರೇಷ್ಮೆ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವಿ ಹಿರಿಯ ರಾಜಕಾರಣಿ..
ಕೂಡ್ಲಿಗಿ ತಾಲ್ಲೂಕಿಗೆ ಕಳೆದ 25 ವರ್ಷಗಳಿಂದ ಅಭಿವೃದ್ಧಿ ಕಾಣದ ಕಾಮಗಾರಿಗಳಿಗೆ ಕಳೆದ 2ವರ್ಷಗಳಲ್ಲಿ ಸರಿಸುಮಾರು 1000 ಕೋಟಿ ರುಪಾಯಿಗಳ ಅಭಿವೃದ್ಧಿ ಕಾಮಗಾರಿಗಳ ಕೆಲಸ ಮಾಡಿಸಿ 670 ಕೋಟಿ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಅನುಮೋದನೆ ಕುಡಿಯುವ ನೀರಿಗೆ 1200 ಕೋಟಿ ರುಪಾಯಿಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಜನಮಾನಸದಲ್ಲಿ ಹೆಮ್ಮೆಯ ಶಾಸಕರಾಗಿ ನೆನಪುಳಿದಿದ್ಧಾರೆ.. ಹಾಗೆಯೇ ಹಿಂದುಳಿದ ತಾಲೂಕಿನ ಅಭಿವೃದ್ಧಿಗೆ ಸದಾ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು ತಾಲೂಕು ಹಾಗೂ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ದೃಷ್ಟಿಯಿಂದ ಶಾಸಕರಾಗಿ ಎನ್ ವೈ ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನವನ್ನು ನೀಡುವ ಮೂಲಕ ಶೈಕ್ಷಣಿಕವಾಗಿ ಹಿಂದುಳಿದ ತಾಲೂಕಿನ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ
ಹಿರಿಯರು ಅನುಭವಿ ರಾಜಕಾರಣಿ ಪಕ್ಷದ ಮೇಲೆ ಭರವಸೆ ಹಾಗೂ ಗೌರವದೊoದಿಗೆ ನಡೆದುಕೊಂಡು ಸಕ್ರಿಯ ಶಾಸಕರಾಗಿಯೂ ಹಾಗೂ ಪಕ್ಷಾತೀತವಾಗಿಯೂ ಎಲ್ಲಾ ಕಾರ್ಯಕರ್ತರ ಮನಸ್ಸು ಗೆದ್ದಿರುವ ಮತ್ತು ಎಲ್ಲಾ ಪಕ್ಷದ ಮುಖoಡರ ಮನಸ್ಸು ಗೆದ್ದಿರುವ ಹಿರಿಯ ಶಾಸಕರಾದ
ಶ್ರೀ ಎನ್ ವೈ ಗೋಪಾಲಕೃಷ್ಣ ಶಾಸಕರಿಗೆ
ನೂತನ ಸಚಿವ ಸoಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಕೂಡ್ಲಿಗಿ ತಾಲೂಕು ಭಾರತೀಯ ಜನತಾ ಪಕ್ಷದ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಪರವಾಗಿ ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಿಗೆ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪನವರಿಗೆ ಮತ್ತು ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರಿಗೆ ಮನವಿ ವಿನಂತಿಸಿಕೊಳ್ಳುತ್ತೇವೆ …
ಕೆ ಚೆನ್ನಪ್ಪ
ಅಧ್ಯಕ್ಷರು
ಬಿಜೆಪಿ ಕೂಡ್ಲಿಗಿ ಮಂಡಲ
ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030