ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮಾನ್ಯ ಬಸವರಾಜ್ ಬೊಮ್ಮಾಯಿ ಅವರಿಗೆ ಹೃದಯ ಪೂರ್ವಕ ಶುಭಾಶಯಗಳು ಹಾಗೂ ಅಭಿನಂದನೆಗಳು.
ನಮ್ಮ ಕೂಡ್ಲಿಗಿ ತಾಲೂಕು ಅತಿ ಹಿಂದುಳಿದ ತಾಲೂಕು ಆಗಿದ್ದು 2018ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಎನ್ ವೈ ಗೋಪಾಲಕೃಷ್ಣ ಸರ್ ರವರು ವಿಧಾನಸಭೆಗೆ ಆಯ್ಕೆ ಆಗಿರುತ್ತಾರೆ. ಎನ್ ವೈ ಗೋಪಾಲಕೃಷ್ಣ ಸರ್ ಅವರು ಆಯ್ಕೆಯಾದ ನಂತರ ನಮ್ಮ ತಾಲ್ಲೂಕಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಹಾಗೂ ಕೂಡ್ಲಿಗಿಯಲ್ಲಿ ಮಿನಿವಿಧಾನಸೌಧ ಮಹಾತ್ಮ ಗಾಂಧಿ ಚಿತಾಭಸ್ಮ ಅಭಿವೃದ್ಧಿ ತಾಲೂಕಿನಲ್ಲಿ ಅನೇಕ ಶಾಲಾ ಕಟ್ಟಡಗಳು ಹಾಗೂ ಅಂಗನವಾಡಿ ಕಟ್ಟಡಗಳ ನಿರ್ಮಾಣ ಮತ್ತು ನಮ್ಮ ತಾಲೂಕಿಗೆ ಕೆರೆಗಳನ್ನು ತುಂಬಿಸುವ ಯೋಜನೆಗೆ ಸರ್ಕಾರದಿಂದ ಅನುದಾನ ಕೊಡಿಸಿ ಆಧುನಿಕ ಭಗೀರಥ ಎಂದು ಹೆಸರಾಗಿದ್ದಾರೆ. ಎನ್ ವೈ ಗೋಪಾಲಕೃಷ್ಣ ಸರ್ ರವರು ದೂರದೃಷ್ಟಿಯುಳ್ಳ ಹಾಗೂ ಅತ್ಯಂತ ಅನುಭವವುಳ್ಳ ರಾಜಕಾರಣಿಯಾಗಿದ್ದಾರೆ. ಮತ್ತು ನಮ್ಮ ತಾಲೂಕಿನ ಅಭಿವೃದ್ಧಿಯಾದಂತೆ ಇಡೀ ರಾಜ್ಯವನ್ನು ಅಭಿವೃದ್ಧಿ ಮಾಡಲು ಸೂಕ್ತ ವ್ಯಕ್ತಿಯಾಗಿರುತ್ತಾರಇಂತಹ ಶಾಸಕರನ್ನು ರಾಜ್ಯದ ಮಂತ್ರಿಯನ್ನಾಗಿ ಮಾಡಿದರೆ ಇವರು ಹೆಚ್ಚಿನದಾಗಿ ಅಭಿವೃದ್ಧಿಗೆ ಒತ್ತು ನೀಡುತ್ತಾರೆ.
ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಸರ್ ರವರು ಮಾನ್ಯ ಶಾಸಕರಾದ ಎನ್ವೈ ಗೋಪಾಲಕೃಷ್ಣ ಅವರಿಗೆ ಮಂತ್ರಿಸ್ಥಾನವನ್ನು ನೀಡಬೇಕೆಂದು ಈ ಮೂಲಕ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇನೆ.
– ಇಂತಿ
ಎಸ್. ಸಣ್ಣ ಬಾಲಪ್ಪ
ಪಂಚಾಯತ್ ರಾಜ್ ನಗರ ಪ್ರಕೋಸ್ಟಕದ ರಾಜ್ಯ ಸದಸ್ಯರು
ಕೂಡ್ಲಿಗಿ ತಾಲೂಕು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030