ಕೂಡ್ಲಿಗಿ:ಅರಣ್ಯಾಧಿಕಾರಿ ರಂಗನಾಥ ನಿಧನ,ಶ್ರದ್ಧಾಂಜಲಿ-
ವಿಜಯನಗರ ಜಿಲ್ಲೆ ಕೂಡ್ಲಿಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ,ಜಿ.ರಂಗನಾಥ (58)ಜುಲೈ 26ರಂದು ಬೆಳಿಗ್ಗೆ ದಾವಣಗೆರೆಯ ಅವರ ನಿವಾಸದಲ್ಲಿದ್ದಾಗ ನಿಧನರಾಗಿದ್ದಾರೆ.ಅವರು ದಾವಣಗೆರೆಯ ಅವರ ನಿವಾಸದಲ್ಲಿದ್ದಾಗ,ಜುಲೈ25ರಂದು ರಾತ್ರಿ ಪಾರ್ಶ್ವವಾಯುಗೆ ತುತ್ತಾಗಿದ್ದರು.
ಅವರು ನಾಯಕನಹಟ್ಟಿ ಸಮೀಪದ ಗೌಡಗೇರಿ ಗ್ರಾಮದವರಾಗಿದ್ದು, ಕೆಲ ದಶಕಗಳಿಂದ ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿ ಕರ್ಥವ್ಯ ನಿರ್ವಹಿಸಿದ್ದರು. ಈ ಹಿಂದೆ ಕೆಲ ವರ್ಷಗಳಕಾಲ ಕೂಡ್ಲಿಗಿಯಲ್ಲಿ ಕರ್ಥವ್ಯ ನಿರ್ವಹಿದ್ದರು,
ನಂತರ ಕೊಡಗು, ಸೇರಿದಂತೆ ಇತರೆಡೆ ಕರ್ತವ್ಯ ನಿರ್ವಹಿಸಿ.ಮರಳಿ ಕೂಡ್ಲಿಗಿ ಉಪ-ವಿಭಾಗ ಅರಣ್ಯ ಸಂರಕ್ಷಾಧಿಕಾರಿಗಳಾಗಿ ಕರ್ಥವ್ಯ ನಿರ್ವಹಿಸುತ್ತಿದ್ದಾರೆ. ಇವರು ಪತ್ನಿ, ಇಬ್ಬರು ಪುತ್ರರು ಓರ್ವ ಪುತ್ರಿ,ಅಪಾರ ಬಂಧು ಬಳಗ,ಸ್ನೇಹ ಬಳಗವನ್ನು ಅಗಲಿದ್ದಾರೆ.
ಶ್ರದ್ಧಾಂಜಲಿ ಅರ್ಪಣೆ-ಮೃತ ರಂಗನಾಥರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿ ಕೂಡ್ಲಿಗಿ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ,
ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶ್ರದ್ಧಾಂಜಲಿ ಅರ್ಪಿಸಿದ್ದಾರೆ
.ಅವರ ನಿಧನಕ್ಕೆ ಕೂಡ್ಲಿಗಿ ತಾಲೂಕಿನ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ವಿವಿದ ಜನಪ್ರತಿನಿಧಿಗಳು,ನಾಗರೀಕರು ಹಾಗೂ ಕೂಡ್ಲಿಗಿ ಅರಣ್ಯ ಇಲಾಖೆ ಹಾಗು ವಿವಿದ ಇಲಾಖಾಧಿಕಾರಿಗಳು ವರ್ಗ ಹಾಗೂ ಸಿಬ್ಬಂದಿ ಸಂತಾಪ ವ್ಯಕ್ತಪಡಿಸಿದ್ದಾರೆ…
ವರದಿ.ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030