ಬೈಕ್ ಗೆ ಲಾರಿ ಡಿಕ್ಕಿ ಬೈಕ್ ಸವಾರ ಮೃತ.ಕೂಡ್ಲಿಗಿ :ವಿಜಯನಗರ ಜಿಲ್ಲೆ ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿ ಸಂಡೂರು ತಾಲೂಕಿನ ಬಂಡ್ರಿ ಹೊರವಲಯದಲ್ಲಿ,ಬೈಕ್ ಗೆ ಲಾರಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜರುಗಿದೆ.
ಕೂಡ್ಲಿಗಿ ವಾಸಿ ಬಸವರಾಜ(57) ತಮ್ಮ ಬೈಕ್ ನಲ್ಲಿ ಸಂಡೂರು ನಿಂದ ಕೂಡ್ಲಿಗಿ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ,ಲಾರಿ ಚಾಲಕನು ಅತಿವೇಗ ಹಾಗೂ ಅಜಾಗರೂಕತೆ ಯಿಂದ ತನ್ನ ಲಾರಿ ಚಲಾಯಿಸಿ ಬೈಕ್ ಗೆ ಡಿಕ್ಕಿ ಹೊಡೆಸಿದ್ದು,ಪರಿಣಾಮ ಬೈಕ್ ಜಖಂ ಗೊಂಡಿದ್ದು ಬೈಕ್ ಸವಾರ ತೀವ್ರ ಗಾಯಗೊಂಡು ಅಸುನೀಗಿದ್ದಾನೆಂದು ತಿಳಿದುಬಂದಿದೆ.ಮೃತ ಬಸವರಾಜ ಕೂಡ್ಲಿಗಿ ಮೂಲದವರಾಗಿದ್ದು, ಉಜ್ಜಿನಿಯ ಖಾಸಗೀ ಶಾಲೆಯಲ್ಲಿ ಗುಮಾಸ್ತರಾಗಿದ್ದ ಎನ್ನಲಾಗಿದೆ. ಘಟನೆ ಜರುಗಿದ ಸುದ್ದಿ ತಿಳಿದ ಗುಡೇಕೋಟೆ 112ಸಿಬ್ಬಂದಿ ಎಎಸೈ ಸುರೇಶ ಹಾಗೂ ಸಣ್ಣಯ್ಯ ಸ್ಥಳಕ್ಕೆ ದ ದೌಡಾಯಿಸಿದ್ದಾರೆ,ಕೂಡ್ಲಿಗಿ108ಸಿಬ್ಬಂದಿ ಕಾಂತರಾಜ ಹಾಗೂ ನಾಗರಾಜ ದಾವಿಸಿದ್ದಾರೆ.
ಕೂಡ್ಲಿಗಿ ಸಿಪಿಐ ವಸಂತ ಅಸೋದೆ ಹಾಗೂ ಪಿಎಸ್ಐ ಶರತ್ ಕುಮಾರ್ ಸ್ಥಳಕ್ಕೆ ಭೆಟ್ಟಿ ನೀಡಿ ಪರಿಶೀಲಿಸಿದ್ದಾರೆ…
ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030