ದಿನಾಂಕ 10/7/2021 ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ
ಚರಂಡಿ ಕಾಮಗಾರಿ
ಪೂರ್ಣಗೊಳಿಸಿ ಇಲ್ಲದಿದ್ದ ಪಕ್ಷದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ದಲಿತ ಪರ ಸಂಘಟನೆಗಳ ಮುಖಂಡರ ಆಕ್ರೋಶ
ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರ ಪಕ್ಕದಲ್ಲಿರುವ ಸರ್ವಿಸ್ ರೋಡ್ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸದೆ ಸಂಬಂಧಪಟ್ಟ ಗುತ್ತಿಗೆದಾರರು ರಸ್ತೆ ಕಾಮಗಾರಿ ಯನ್ನು ಮಾತ್ರ ಸಂಪೂರ್ಣಗೊಳಿಸಿ ಹೆದ್ದಾರಿ ಪಕ್ಕದಲ್ಲಿ ನೂರಾರು ದಲಿತರ ಕುಟುಂಬಗಳು ವಾಸಿಸುವ ಮನೆಗಳ ಪಕ್ಕದಲ್ಲಿ ಇರುವ ಚರಂಡಿ ಕಾಮಗಾರಿ ಯನ್ನು ಮಾತ್ರ ಹಾಗೆ ಬಿಟ್ಟು ಹೋಗಿರುತ್ತಾರೆ. ಇದರಿಂದ ಮಳೆ ಬಂದರೆ ಸಾಕು ರಸ್ತೆಯ ಮೇಲೆ ಬರುವ ನೀರು ದಲಿತರ ಕುಟುಂಬಗಳ ಮನೆಗಳಿಗೆ ನುಗ್ಗಿ ಅಂಗಳಗಳಲ್ಲಿ ನೀರು ನಿಂತು ಹೊರಗಡೆ ಬರದಂತೆ ನೀರು ನಿಲ್ಲುತ್ತದೆ. ಈ ಕಾಮಗಾರಿಯ ವಿಚಾರವಾಗಿ ಯಾವ ಅಧಿಕಾರಿಗಳಿಗೆ ಹೇಳಬೇಕು ಒಂದು ತಿಳಿಯದಂತಾಗಿದೆ. ಈ ವಿಚಾರವಾಗಿ l&t ಕಂಪನಿ ಅವರಿಗೆ ತಿಳಿಸಿದ್ದು ಕೂಡ ಪ್ರಯೋಜನವಾಗಿಲ್ಲ ಈ ಹಿಂದೆ ಇದ್ದ ತಾಸಿಲ್ದಾರ್ ಮಹಾಬಲೇಶ್ವರ ರವರು ತಾತ್ಕಾಲಿಕವಾಗಿ ವ್ಯವಸ್ಥೆಯನ್ನು ಮಾಡಿದ್ದರು ಆದರೂ ಕೂಡ ಪ್ರಯೋಜನವಾಗಲಿಲ್ಲ ಎಂದು ದಲಿತ ಮುಖಂಡ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಮರಿಸ್ವಾಮಿ ಮಾತನಾಡಿದರು. ಹೇಮಂತ್ ಕುಮಾರ್ ಮಾತನಾಡಿ ಈ ಕಾಮಗಾರಿಯ ಬಗ್ಗೆ ಸುಮಾರು ಸಾರಿ ಮಾಧ್ಯಮಗಳಲ್ಲಿ ಪ್ರಚಾರ ಮಾಡಿದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಹೇಳಿದರು. ದಲಿತ ಮುಖಂಡರಾದ T.ಗಂಗಾಧರ್ ಮಾತನಾಡಿ ಶೀಘ್ರದಲ್ಲಿ ದಲಿತ ಕುಟುಂಬಗಳು ವಾಸಿಸುವ ಮನೆಗಳ ಪಕ್ಕದಲ್ಲಿರುವ ಚರಂಡಿಯನ್ನು ಸಂಪೂರ್ಣ ಮಾಡದಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮುಷ್ಕರ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನ್ಯಾಯಾಲಯಕ್ಕೆ ಮೊರೆ ಹೋಗಲಾಗದು ಎಂದು ಹೇಳಿದರು. ಇಲ್ಲಿ ಹಾಗುವ ತೊಂದರೆಗಳ ಬಗ್ಗೆ ಕಾನಹೊಸಹಳ್ಳಿ ಮುಖಂಡರು ಸಾರ್ವಜನಿಕರು ದಲಿತ ಪರ ಸಂಘಟನೆ ಕಾರರು ಎಲ್ಲಾ ರಾಜಕೀಯ ಗಣ್ಯರು ಶೀಘ್ರದಲ್ಲಿ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮಾಧ್ಯಮದ ಮೂಲಕ ಮನವಿ ಮಾಡಿದರು…
ವರದಿ.ವಿರೇಶ್, ಕೆ, ಎಸ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030