- ಕಾನಹೊಸಹಳ್ಳಿ ಪಟ್ಟಣದಲ್ಲಿ ಹೇಮಾವತಿ ಬಡಾವಣೆಯಲ್ಲಿ ಎಲೆಟ್ರಿಕ್ ಬೈಕ್ ಶೋರೂಮ್ ನ್ನು ಕಾನಮಡುಗಿನ ದಾಸೋಹ ಮಠದ ಧರ್ಮಾಧಿಕಾರಿಗಳಾದ ಐಮಡಿ ಶರಣಾರ್ಯರು ಉದ್ಘಾಟಿಸಿದರು.. ಉದ್ಘಾಟಿಸಿ ಮಾತನಾಡಿ ಪೆಟ್ರೋಲ್ ಬೆಲೆ ಗಗನಕ್ಕೇರಿದೆ ಇಂತಹ ಸಂದರ್ಭದಲ್ಲಿ ವಿದ್ಯುತ್ ಚಾರ್ಜ್ ನಿಂದ ಓಡಾಡುವ ಮೋಟಾರ್ ಬೈಕ್ ದ್ವಿಚಕ್ರ ವಾಹನಗಳ ಅವಶ್ಯಕತೆ ಇದ್ದು ಶೋರೂಮ್ ಮಾಲೀಕರು ನಿಗದಿತ ಬೆಲೆಯಲ್ಲಿ ಮಾರಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಕಾನಹೊಸಹಳ್ಳಿ ವೀರೇಶ್ ಕಿಟ್ಟಪ್ಪನವರು ಮಾತನಾಡಿ ಪೆಟ್ರೋಲ್ ಬೆಲೆ ತುಟ್ಟಿಯಾಗುತ್ತಿರುವ ಈ ಸಂದರ್ಭದಲ್ಲಿ ಬೈಕ್ ಪ್ರಿಯರಿಗೆ ಎಲೆಟ್ರಿಕ್ ಬೈಕ್ ವರದಾನವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾನಮಡುಗು ದಾಸೋಹ ಮಠದ ಧರ್ಮಾಧಿಕಾರಿಗಳು ಸೇರಿದಂತೆ ಶೋರೂಮ್ ಮಾಲೀಕರು, ಕಾನಹೊಸಹಳ್ಳಿ ಗ್ರಾಮಸ್ಥರು ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು..
ವರದಿ. ಡಿ ಎಂ, ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030