ವರದಿ ಜೂನ್ 17 ಕೂಡ್ಲಿಗಿ
ಸಾಮಾನ್ಯ ಸಭೆ ಮರಬ ಗ್ರಾಮ ಪಂಚಾಯತಿ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಮರಬ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾ ಭಾಷಾ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಸಲಾಗಿದ್ದು ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು ಹಾಗೂ ಕೋವಿಡ್ 19 ರ ಎರಡನೇ ಹಲೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜನರಿಗೆ ಉದ್ಯೋಗ ನೀಡಿ ರೈತರು ತಮ್ಮ ಸ್ವಂತ ಜಮೀನುಗಳಲ್ಲಿ ಬುದು ನಿರ್ಮಾಣ ಮಾಡಿಕೊಳ್ಳುವುದರ ಕುರಿತು ಹಾಗೂ 15ನೇ ಹಣಕಾಸಿನಲ್ಲಿ ಹಣ 28 ಲಕ್ಷ ಪಂಚಾಯತಿಗೆ ಬರುವ ಸಾಧ್ಯತೆ ಇದ್ದು ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸುವ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಸರ್ಕಾರ ನಿಯಮದ ಪ್ರಕಾರ ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ನೀರಗಂಟಿ ಮತ್ತು ಜಾಡ್ ಮಾಲ್ ಅವರಿಗೆ ವೇತನ ನೀಡಲು ನಿರ್ಣಯ ಜಾರಿಗೆಗೊಳಿಸಿ ಬೀದಿ ದೀಪಗಳು ರಸ್ತೆ ನಿರ್ಮಾಣಗಳು ಹಳ್ಳಿಗಳಲ್ಲಿ ಸ್ವಚ್ಛತೆ ಕಾರ್ಯಕ್ರಮ ಮೂಲಸೌಕರ್ಯಗಳ ಬಗ್ಗೆ ಒತ್ತು ನೀಡಲು ನಿರ್ಣಯ ಕೈಗೊಂಡಿದ್ದು ಗ್ರಾಮಪಂಚಾಯತ ಉಪಾಧ್ಯಕ್ಷರಾದ ವಿ ದುರ್ಗಮ್ಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಬೋರಣ್ಣ ಹಾಗೂ ಪಂಚಾಯತಿಯ ಎಲ್ಲ ಸರ್ವ ಸದಸ್ಯರು ಸಿಬ್ಬಂದಿ ಸಾಮಾನ್ಯ ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ಗ್ರಾಮ ಪಂಚಾಯತಿ ಸದಸ್ಯರು ಅಖಿಲ ಭಾರತ ಯುವಜನ ಫೆಡರೇಷನ್ ತಾಲೂಕು ಅಧ್ಯಕ್ಷರಾದ ಕೆ ಕರಿಯಪ್ಪ ಪತ್ರಿಕೆಗೆ ತಿಳಿಸಿದರು…
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030