ಚಾಮರಾಜನಗರ ನೌಕರರು ಮತ್ತು ಯುವಕರ ಸಂಘದಿಂದ ಪುಡ್ ಕಿಟ್ ವಿತರಣೆ…
ಕೊರೊನಾ ಎರಡನೇ ಅಲೆ ರಾಜ್ಯದ ಗ್ರಾಮೀಣ ಭಾಗದಲ್ಲಿ ಹೆಚ್ಚು ಕಾಣಿಸಿಕೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನಲೆ ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮದಲ್ಲಿ ನೌಕರರು ಹಾಗೂ ಯುವಕರ ಸಂಘದ ವತಿಯಿಂದ ಆಹಾರ ಕಿಟ್ ಮತ್ತು ಮಾಸ್ಕ್ ವಿತರಿಸಿದರು.ಬಿಸಲವಾಡಿ ಗ್ರಾಮದ ಅಂಬೇಡ್ಕರ್ ಭವನದ ಎದುರು ಡಾ.ಬಿ.ಆರ್. ಅಂಬೇಡ್ಕರ್ ಪೋಟೊಗೆ ನಮಸ್ಕರಿಸಿ ದೀಪ ಹಚ್ಚಿ ಪುಡ್ ಕಿಟ್ ಮತ್ತು ಮಾಸ್ಕ್ ವಿತರಿಸಿದರು. ಗ್ರಾಮದ ಬಡವರು , ನಿರ್ಗತಿಕರು, ಸೋಂಕಿತರಿಂದ ಗುಣಮುಖರಾದ ಕುಟುಂಬ ಹಾಗೂ ಕೋವಿಡ್ ನಿಂದ ಮೃತ ಪಟ್ಟ ಕುಟುಂಗಳು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸುಮಾರು ೨೦೦ಕ್ಕೂ ಹೆಚ್ಚು ಆಹಾರ ಕಿಟ್ ಮತ್ತು ಮಾಸ್ಕ್ ನೀಡಿದರು.ಈ ವೇಳೆ ನೌಕರರು ಮತ್ತು ಯುವಕರ ಸಂಘದ ಅಧ್ಯಕ್ಷ ,ಉಪಾಧ್ಯಕ್ಷ ,ಸದಸ್ಯರು , ಬಿಸಲವಾಡಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರು ಬಾಗಿಯಾಗಿದ್ದರು…
ವರದಿ.ಪ್ರವೀಣ್ ಚಾಮರಾಜನಗರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030