ವರದಿ ಜೂನ್ 16 ಕೂಡ್ಲಿಗಿ
ತೈಲ. ಸಿಲಿಂಡರ್. ದಿನಬಳಕೆಯ ಸಾಮಗ್ರಿಗಳ ಬೆಲೆ ಏರಿಕೆ ಭಾರತ ಕಮ್ಯುನಿಸ್ಟ್ ಪಕ್ಷ. ಖಂಡನೆ
ಕೂಡ್ಲಿಗಿ÷ ಪೆಟ್ರೋಲ್ ಡೀಸೆಲ್ ಗ್ಯಾಸ್ ಹಾಗೂ ದಿನಬಳಕೆಗೆ ಬೇಕಾಗುವ ಸಾಮಗ್ರಿಗಳ ಬೆಲೆ ದಿನೇ ದಿನೇ ಜಾಸ್ತಿಯಾಗುತ್ತಿದೆ ಈಗಾಗಲೇ ಪ್ರತಿ ವಸ್ತುಗಳ ಬೆಲೆ ಗಗನಕ್ಕೇರಿದ್ದು ಜನಸಾಮಾನ್ಯರು ಖರೀದಿಸಲು ಸಾಧ್ಯವಾಗದೆ ಸಾಮಾನ್ಯರು ಬದುಕಲು ಕಷ್ಟಕರವಾಗಿದ್ದು. ನಮ್ಮನ್ನು
ಹಾಳುವಂತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಬಗ್ಗೆ ಚಿಂತಿಸದೆ ಅಧಿಕಾರದ ಕಿತ್ತಾಟದಲ್ಲಿ ರಾಜಕೀಯ ಗುದ್ದಾಟದಲ್ಲಿ ತೊಡಗಿಕೊಂಡಿವೆ ಕೋವಿಡ್ 19ರ ಸಂದರ್ಭದಲ್ಲಿ ರೋಗಕ್ಕೆ ಬಲಿಯಾದ ಜನರಿಗೆ ಚಿಕಿತ್ಸೆ ನೀಡದೆ ಸರ್ಕಾರ ವಿಫಲವಾಗಿದ್ದು ವೈರಸ್ ಬಾರದಂತೆ ಸಾರ್ವಜನಿಕರಿಗೆ ವ್ಯಾಕ್ಸಿನ್ ನೀಡುವಲ್ಲಿ ಸರ್ಕಾರ ಈಗಾಗಲೇ ಹಿನ್ನಡೆಯಾಗಿದ್ದು ಲಾಕ್ಡೌನ್ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಪರಿಹಾರ ಕಲ್ಪಿಸುವಲ್ಲಿ ವಿಫಲವಾಗಿವೆ ಹಾಗೂ ಕೇಂದ್ರ ಸರ್ಕಾರ ರೈತರ ವಿರೋದಿ ಎಪಿಎಂಸಿ ಕಾಯ್ದೆ ಗೋಹತ್ಯೆ ನಿಷೇಧ ಕಾಯ್ದೆ ರೈತರು ಬೆಳೆದ ಬೆಳೆಗೆ ಬೆಲೆ ನಿಗದಿಪಡಿಸಿದೆ ಭಾರತ ದೇಶದ ಆರ್ಥಿಕ ವ್ಯವಸ್ಥೆಯನ್ನು ಕುಸಿಯುವಂತೆ ಮಾಡಿದ್ದು ಆದಕಾರಣ ಈದಿನ ಎಡಪಕ್ಷಗಳು ರಾಜ್ಯ ವ್ಯಾಪ್ತಿ ಕರೆ ನೀಡಿದ ಅಂಗವಾಗಿ ಕೂಡ್ಲಿಗಿಯಲ್ಲಿ ಶಾಸಕರ ಸಹಾಯಕರಾದ ಶ್ರೀಕಾಂತ್ ಬಾಬು ಅವರಿಗೆ ತಮ್ಮ ಬೇಡಿಕೆಗಳ ಮನವಿಯನ್ನು ನೀಡಲಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ತಾಲೂಕು ಕಾರ್ಯದರ್ಶಿ ಎಚ್. ವೀರಣ್ಣ ಮಾತನಾಡಿದರು ಮನವಿ ಸ್ವೀಕರಿಸಿದ ಶಾಸಕರ ಆಪ್ತ ಸಹಾಯಕ ಶ್ರೀಕಾಂತ್ ಬಾಬು ಮಾತನಾಡಿ ಈಗಾಗಲೇ ಶಾಸಕರ ಗಮನಕ್ಕೆ ತಂದಿದ್ದು ಶಾಸಕರು ಮನವಿ ಪಡೆಯುವಂತೆ ತಿಳಿಸಿದ್ದು ತಾವು ಕೊಟ್ಟ ಮನವಿಯನ್ನು ಕೂಡಲೇ ಶಾಸಕರಿಗೆ ತಲುಪಿಸುತ್ತೇನೆ ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ ಯು ಪೆನ್ನಪ್ಪ ಖಜಾಂಚಿ ಸಿಪಿಐ ಪಕ್ಷ ಪ್ರಕಾಶ್ ಕಟ್ಟಡ ಕಾರ್ಮಿಕ ಸಹಕಾರ್ಯದರ್ಶಿ ಕರಿಯಪ್ಪ ಗ್ರಾಮ ಪಂಚಾಯತಿ ಸದಸ್ಯರು ಅಖಿಲ ಭಾರತ ಯುವಜನ ಫೆಡರೇಷನ್ ತಾಲೂಕ ಅಧ್ಯಕ್ಷರು ಜಿಎಸ್ ಬಸವರಾಜ್ ಕಾರ್ಯದರ್ಶಿ ವಿಠ್ಠಲ್ ಖಜಾಂಚಿ ಅಮೀರ್ ಸಿಪಿಐ ಮುಖಂಡರು ಭಾಷಾ ಕಟ್ಟಡ ಕಾರ್ಮಿಕ ಮುಖಂಡರು ಅನಂತೇಶ್ ಕೆ ರೇಣುಕಮ್ಮ ಸಿಪಿಐ ಪಕ್ಷದ ಸಹಕಾರ್ಯದರ್ಶಿ ಇನ್ನು ಮುಂತಾದವರು ಉಪಸ್ಥಿತಿ ಇದ್ದರು..
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030