ಅರ್ಹರಿಗೆ ವಸತಿ ಕಲ್ಪಿಸಬೇಕು- ತಾಪಂ ಇಓ,ಜಿ.ಎಮ್.ಬಸಣ್ಣ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲಿರುವ ನಿರಾಶ್ರಿತ ಅಲೆ ಮಾರಿ ಸಮುದಾಯದವರಿಗೆ,ವಸತಿ ಕಲ್ಪಿಸಲು ರಾಜೀವಗಾಂಧೀ ವಸತಿ ನಿಗಮದ ವತಿಯಿಂದ ಡಿ.ದೇವರಾಜು ಅರಸು ವಸತಿ ಯೋಜನೆಯಡಿ ವಿಷೇಶ ವರ್ಗದಡಿ ವಸತಿ ಕಲ್ಪಿಸಲು.ತಾಲೂಕಿನ ಅರ್ಹ ಗೊಲ್ಲ ಸಮುದಾಯದ 2300ಪಲಾನುಭವಿಗಳಿಗೆ ವಸತಿ ಸೌಕರ್ಯ ಕಲ್ಪಿಸಲು,ರಾಜೀವ ಗಾಂಧಿ ವಸತಿ ನಿಗಮದಿಂದ ಅರ್ಜಿ ಆಹ್ವಾನಿಸಲಾಗಿದ್ದು ಪಟ್ಟಿ ಮಾಡಲು ಯೋಜನೆ ರೂಪಿಸಲಾಯಿತು.ಸಭೆಯು ತಹಶಿಲ್ದಾರರಾದ ಟಿ.ಜಗದೀಶರವರ ಅಧ್ಯಕ್ಷತೆಯಲ್ಲಿ ತಾಪಂ ಕಾರ್ಯನಿರ್ವಣಾಧಿಕಾರಿ ಜಿ.ಎಮ್.ಬಸಣ್ಣ ನೇತೃತ್ವದಲ್ಲಿ ಜರುಗಿತು.ಅವರು ಮಾತನಾಡಿ ಅರ್ಹರನ್ನು ಪತ್ತೆಹಚ್ಚಿ ವಸತಿ ಕಲ್ಪಿಸಲು, ಇಲಾಖಾಧಿಕಾರಿಗಳೊಂದಿಗೆ ಸಮುದಾಯದ ಮುಖಂಡರು ಸ್ಪಂಧಿಸಬೇಕೆಂದು ಅವರು ಕರೆನೀಡಿದರು.ಹಿಂದುಳಿದ ವರ್ಗದ ಇಲಾಖಾಧಿಕಾರಿಗಳು ಹಾಗೂ ವಿವದ ತಾಲೂಕು ಮಟ್ಟದ ಅಧಿಕಾರಿಗಳು,ತಾಲೂಕಿನ ಗೊಲ್ಲ ಸಮುದಾಯದ ವಿವಿದ ಮುಖಂಡರು ಮತ್ತು ಸಂಘಟನೆಯ ಪದಾದಿಕಾರಿಗಳು,ಹಿರಿಯರು ಸಭೆಯಲ್ಲಿದ್ದರು…
ವರದಿ.ಡಿ.ಎಂ.ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030